ಅರ್ಥವಾಗದು ನನಗೆ
ಒಗಟಿನ ಮಾತು
ನಿಮ್ಮ ಪ್ರಬುದ್ಧ ನಡೆ-ನುಡಿ
ವ್ಯರ್ಥ ಜೀವಿ ನಾ
ಕಾರಣ......
ಮನಸಿದು ಹಸಿಗೋಡೆ...!
ಒಲಿಯದು ನನಗೆ
ಸಂಸ್ಕಾರ ಪಾಠ
ನಿಮ್ಮ ಜಗದ ನೀತಿ-ನಿಯಮ
ನನ್ನ ಪುಟ್ಟ ಜಗತ್ತೇ ಬೇರೆ
ಕಾರಣ.....
ಮನಸಿದು ಹಸಿಗೋಡೆ...!
ಶಕುತಿ ಇಲ್ಲ ನನಗೆ
ತಾಳಲು ಕಟು ಮಾತು
ನಿಮ್ಮ ಹಾಗಿನ ಧೈರ್ಯ
ಹಾಲಿನಂಥ ಮನಸು ಒಡೆದು ಹೋದೀತು
ಕಾರಣ.....
ಮನಸಿದು ಹಸಿಗೋಡೆ...!
ಮುಕುತಿ ಬೇಡ ನನಗೆ
ಸ್ವರ್ಗದ ಬಾಗಿಲಿಗೆ
ಅಲ್ಲ ನಾ ನಿಮ್ಮಂಥ ಆಸ್ತಿಕ
ಭಕುತಿಯೇ ಇಲ್ಲ ನನ್ನ ಪಾಲಿಗೆ
ಕಾರಣ....
ಮನಸಿದು ಹಸಿಗೋಡೆ...!
ನಿಮ್ಮಂತೆ ನಾನಲ್ಲ
ನನ್ನಂತೆ ನೀವಿಲ್ಲ
ಬದುಕಲಾರೆ ನಿಮ್ಮ ಹಾಗೆ ನಾ
ಕ್ರೂರ ಮನಗಳ ನಡುವೆ ಇರೆ ನಾ
ಕಾರಣ...
ಮನಸಿನ್ನೂ ಹಸಿಗೋಡೆ....!!
Monday, December 24, 2007
Monday, December 17, 2007
ಸತ್ಯ
ಮೌನ ರಾಗದಲ್ಲಿ
ನಿಶಬ್ದ ಗಾನ
ಇದ್ದರೂ ಕೇಳದು
ತೆರೆಯಬೇಕಿದೆ ಮನದ ಕಿವಿ
ಹಳೆಯ ಶಬ್ದಗಳಲ್ಲಿ
ಅದ್ಭುತ ಕವನ!
ಸಾಧ್ಯವಾಗದು ಯಾರಿಗೂ
ಜನ್ಮ ತಾಳಬೇಕಿದೆ ಶ್ರೇಷ್ಠ ಕವಿ!
ಹರಿದ ತಂತಿಯ ವೀಣೆಗೆ
ವೈಣಿಕನ ಹಂಗಿಲ್ಲ
ಸಿಗದು ನಾದ
ಚದುರಿಹೋದ ಅರ್ಥಗಳ ಕವನಕೆ
ಓದುಗನ ಹಂಗಿಲ್ಲ
ಅದು ಬರಿ ಮೊಂಡುವಾದ
ನಿಶಬ್ದ ಗಾನ
ಇದ್ದರೂ ಕೇಳದು
ತೆರೆಯಬೇಕಿದೆ ಮನದ ಕಿವಿ
ಹಳೆಯ ಶಬ್ದಗಳಲ್ಲಿ
ಅದ್ಭುತ ಕವನ!
ಸಾಧ್ಯವಾಗದು ಯಾರಿಗೂ
ಜನ್ಮ ತಾಳಬೇಕಿದೆ ಶ್ರೇಷ್ಠ ಕವಿ!
ಹರಿದ ತಂತಿಯ ವೀಣೆಗೆ
ವೈಣಿಕನ ಹಂಗಿಲ್ಲ
ಸಿಗದು ನಾದ
ಚದುರಿಹೋದ ಅರ್ಥಗಳ ಕವನಕೆ
ಓದುಗನ ಹಂಗಿಲ್ಲ
ಅದು ಬರಿ ಮೊಂಡುವಾದ
Subscribe to:
Posts (Atom)