Monday, September 21, 2009

ಬಿನ್ನಹ ಮುಗಿಲಿಗೆ

ಮಳೆಯಿಲ್ಲದ ನೆಲದಲ್ಲಿ
ಕನಸಿಗೂ ಬರಗಾಲ
ಜೀವನ ಪರ್ಯಂತ..
ಬಿರುಕಿದ ಇಳೆಯಲ್ಲಿ
ಕುಸಿದು ಬಿದ್ದ ದನಿಯ
ಮೌನ ಪ್ರಾರ್ಥನೆ ..
ಅದರ ಆಸೆ ಜೀವಂತ

ಬಾರದ ಮಳೆಯಿಂದ
ತಂಪಾಗಿಲ್ಲ ಇಳೆ
ಒಡಲು ಖಾಲಿ ಖಾಲಿ
ಒಲುಮೆಯ ಮರದ
ಎಲೆಗಳು ಉದುರಿವೆ
ಮತ್ತೆ ಬಿಕ್ಕಿ ಬಿಕ್ಕಿ
ಬಿರುಗಾಳಿಗೆ ತೇಲಿ

ದೂರದೂರಿಂದ ಮುಗಿಲ
ಸವಾರಿ ಇಲ್ಲೇ ನುಗ್ಗಿದಂತೆ
ಜೀವದ ಕರೆಗೆ
ಛೆ! ನಾಲ್ಕು ಹನಿಯನ್ನೂ
ಚಿಮುಕಿಸದೆ
ಹೊರಟ ವೇಕೋ
ಮತ್ತೆ ತೆರೆಮರೆಗೆ

ಓ ಮುಗಿಲೇ ಮುನಿದೆಹೆ ಏಕೆ
ಬಾರದೆ ನಮ್ಮೀ ನೆಲಕೆ
ಕರಗಿ ಉದುರಲು
ನಿನಗೂ ತೆರಬೇಕೆ ಸುಂಕ ?
ಕರುಣಿಸಿ ಕರಗು
ತಣಿಯಲಿ ಧರೆ
ಎಂದೂ ತೋರದೆ ಬಿಂಕ..