Sunday, September 30, 2012

ದೃಷ್ಟಿಕೋನ

ತಕರಾರಿರುವುದು ಪುಣ್ಯಕೋಟಿಯ


ಸತ್ಯ ಸಂಧತೆಯಲ್ಲ

ಪುಣ್ಯವಂತೆ ಆ ಆಕಳು....

ಮನಸನ್ನು ಘಾಸಿ ಗೊಳಿಸಿದ್ದು

ಹುಲಿರಾಯನ ದಾರುಣ ಸಾವು...

ಎಂಥ ಪಾಪದ ಹುಲಿಯು ಇದು

ಹುಲಿ ಹುಲ್ಲನ್ನು ಮೇದೀತೆ?

ಪುಣ್ಯಕೋಟಿಯ ಬೇಟೆಯಾಡಲು

ಹುಲಿಗೆ ಪ್ರಾಕೃತಿಕ ಹಕ್ಕಿತ್ತು...



ಪುಣ್ಯಕೋಟಿಯೇನೋ ತನ್ನ ಮಾತು ಉಳಿಸಿಕೊಂತು

ಹುಲಿ ಕರುಣೆಗೆ ಕಟ್ಟುಬಿದ್ದು ತನ್ನ ತಾನೇ ಕೊಂದುಕೊಂತು

ಸರಿ-ತಪ್ಪು ಯಾರದೂ ಅಲ್ಲ..

ಹಸುವಿಗೆ ಹುಲ್ಲು

ಹುಲಿಗೆ ಹಸುವು

ಎಲ್ಲವೂ ಹಸಿವೆಗೆ ....



ಕಥೆ ಕೇಳುವ ನಮಗೆ

ಆಕಳು ಮತ್ತು ಕರುವಿನ ಬಗ್ಗೆ ಅನುಕಂಪ...

ಹುಲಿಯ ವರ್ತನೆ ಭೀಬತ್ಸ!

ಕೊನೆಗೆ...

ಪುಣ್ಯಕೋಟಿಯ ಸತ್ಯಮೇವ ಜಯತೆ ಸಂದೇಶ...

ಕಣ್ಮರೆ ಯಾಗುವ ಹುಲಿಯ ತ್ಯಾಗ,

ಹಾಗು ಪುಣ್ಯಕೋಟಿ ಬಗ್ಗೆ

ನೆಮ್ಮದಿಯ ನಿಟ್ಟುಸಿರು...





"ಎನ್ನ ಒಡಹುಟ್ಟಕ್ಕ ನೀನು"

ಎಂದ ವ್ಯಾಘ್ರ ನ ಸಾವು ನ್ಯಾಯವೇ..?

ಆರು ನಮಗೆ ಹಿತವರು...?



ಜೀವ ಎಲ್ಲರಿಗೂ ಒಂದೇ....

ತದ್ವಿರುದ್ಧ - ಹನಿಗವನಗಳು

ತದ್ವಿರುದ್ಧ - ಹನಿಗವನಗಳು




******



ವರ್ಷಧಾರೆ ಸುರಿದರೂ

ಹಣೆಯ ಬೆವರು ಬಿದ್ದರೂ

ಉತ್ತಿ - ಬಿತ್ತಿದ ಕಾಯಕ ಕಡೆಗಣಿಸಿ..

ಫಲ ನೀಡದೆ ನಿರುತ್ತರಳಾದಳು ಭೂಮಿ..





******



ಯಾರೂ ತಿಳಿಯದ..

ಯಾರೂ ತುಳಿಯದ

ಹಾದಿಯು ತಂತಾನೇ ಮುಂದೆ ಸಾಗುತಿದೆ

ಯಾರಿಗೂ ಸಿಗದೇ...



******



ಜಾಲಿ ಗಿಡದ ಸುಂದರ ಮುಳ್ಳು

ಬಿಸಿಲ ಹಬೆ ತಾಳದೆ ಅಳುತಿರಲು

ಪ್ರೀತಿ ಹೃದಯವು ಮುಳ್ಳಿನ ಮೇಲೆ ಬಿತ್ತು..

ಮುಳ್ಳು ತಂಪಾಯ್ತು ..

ಹೃದಯ ಸತ್ತು ಹೋಯ್ತು...



******



ಹೆಣ್ಣೊಬ್ಬಳ

ಕಣ್ಣೀರು ನಗುತ್ತಿತ್ತು !

ಕಣ್ಣ ಬಂಧನ ಬಿಡಿಸಿಕೊಂಡಾಗ

ಅವಳ ನಗುವು ಅಳುತ್ತಿತ್ತು!

ತುಟಿಯಂಚಿನಿಂದ ಹೊರ ಹಾಕಿದಾಗ



******



ಪ್ರಶ್ನೆಯೊಂದು ಪ್ರಶ್ನೆಯಾಗಿಯೇ ಇದೆ

ಉತ್ತರ ಸಿಗದೇ

ಉತ್ತರವೊಂದು ಮತ್ತೆ ಪ್ರಶ್ನೆಯಾಗಿದೆ

ಅರ್ಥವೇ ಆಗದೆ... !





******



ಮನಸು ಕಿವುಡು... ಹೃದಯದ ಮಿಡಿತಕೆ

ಭಾವ ಕುರುಡು... ಮನಸಿನ ಕುಣಿತಕೆ

ಹೃದಯ ಮೂಕ.... ಭಾವದ ನೋವಿಗೆ..