ನೀ ಕೊಟ್ಟ ಛಡಿ ಏಟಿನ ಗುರುತು
ಮನದಲ್ಲಿ ಮಾಸುವ ಮುನ್ನ
ನೀ ಇಟ್ಟ ಬರೆಗೆ ಹೃದಯ
ತಲ್ಲಣ!
ಹೆಪ್ಪುಗಟ್ಟಿದ ರಕ್ತವೂ
ಅಲ್ಲಿಂದ ಜಿನುಗಲು
ಅಶಕ್ತ !
ಒಡಲಿಗೆ ಇಟ್ಟ ಬೆಂಕಿ
ಆರಿಸಲಾಗದ
ಕಾಡ್ಗಿಚ್ಚು !
ಪಸರಿಸಿ ತನು ಮನದ ತುಂಬೆಲ್ಲಾ
ಉಳಿದದ್ದು ಬರೀ
ಬೂದಿ!
ನೆನಪಿನ ಗೊಂಚಲ
ನೀ ತಿವಿದು ಹೋದ ಸಂಜೆ
ಕಣ್ಣಂಚಿನ ಕಂಬನಿಯೂ ಆಗಿತ್ತು
ಬಿಸಿ!
ಕಲ್ಪನೆಗೂ ಮೀರಿದ್ದ
ಅಭಿಲಾಷೆಗಳ ಬಲೂನು
ಚುಚ್ಚು ಮಾತಿನ ಸೂಜಿಗೆ
ವಿಸ್ಫೋಟ!
ನಮ್ಮ ಕನಸುಗಳ ಮಾರಿಕೊಂಡ
ಆ ರಾತ್ರಿಯ ಕಹಿ ಸಮಯ
ಈಗಲೂ ಬೆಂಬಿಡದೆ ಕಾಡುವ
ದುಃಸ್ವಪ್ನ!
ತಣ್ಣಗೆ ಮಲಗಿದ್ದ ಪ್ರೀತಿಗೆ
ನೀ ಇಟ್ಟ ಕೊಳ್ಳಿ
ಆಗಿ ಹೋಯ್ತು
ಚಿತೆ!
ಅರ್ಧ ಸುಟ್ಟು ಉಳಿದ ಪಳಿಯುಳಿಕೆ
ಎಂದೆಂದೂ ಅಳಿಯದ
ಚಿಂತೆ!
Saturday, March 14, 2009
Monday, February 23, 2009
ಆಡೋಣ ಬಾ...
ಓಡೋಣ ಬಾ
ಹಿಮಗಿರಿಯ ತುತ್ತ ತುದಿಗೆ
ಅಲ್ಲಿ ಬೆಳೆಸೋಣ ಬಾ
ನಮ್ಮದೇ ಹೂದೋಟ
ಜಗದ ಹಂಗಿಲ್ಲದೆ
ಆಡೋಣ ಬಾ ಜೂಟಾಟ
ನಿನ್ನ ಕಣ್ಣು ನಾನಾಗೇ
ನನ್ನ ಕಣ್ಣು ನೀನಾಗು
ಹುಡುಕಾಟದಲ್ಲೇ
ಮೀರುವ ಜಗದ ಎಲ್ಲೆ
ಹುರುಪಿನಿಂದ ನಾವು
ಆಡೋಣ ಕಣ್ಣಾ ಮುಚ್ಚಾಲೆ
ಸೃಷ್ಟಿಸೋಣ
ಪ್ರೀತಿಯ ನದಿಯಲ್ಲಿ
ಅನುರಾಗದ ಅಲೆ
ಎಡವದಂತೆ ಆಡೋಣ
ಮನದ ಮೈದಾನದಲ್ಲೇ
ಅನವರತ ಕುಂಟು ಬಿಲ್ಲೆ
ನೆನಪಿರಲಿ...
ಸೋಲಿರಲಿ ಗೆಲುವಿರಲಿ
ಆಟದ ಸ್ಪೂರ್ತಿಯೇ
ಬೇಕು ಬದುಕಿಗೆಲ್ಲಾ
ಫಲಿತಾಂಶ ಯಾಕೆ ಬೇಕು
ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ !
ಹಿಮಗಿರಿಯ ತುತ್ತ ತುದಿಗೆ
ಅಲ್ಲಿ ಬೆಳೆಸೋಣ ಬಾ
ನಮ್ಮದೇ ಹೂದೋಟ
ಜಗದ ಹಂಗಿಲ್ಲದೆ
ಆಡೋಣ ಬಾ ಜೂಟಾಟ
ನಿನ್ನ ಕಣ್ಣು ನಾನಾಗೇ
ನನ್ನ ಕಣ್ಣು ನೀನಾಗು
ಹುಡುಕಾಟದಲ್ಲೇ
ಮೀರುವ ಜಗದ ಎಲ್ಲೆ
ಹುರುಪಿನಿಂದ ನಾವು
ಆಡೋಣ ಕಣ್ಣಾ ಮುಚ್ಚಾಲೆ
ಸೃಷ್ಟಿಸೋಣ
ಪ್ರೀತಿಯ ನದಿಯಲ್ಲಿ
ಅನುರಾಗದ ಅಲೆ
ಎಡವದಂತೆ ಆಡೋಣ
ಮನದ ಮೈದಾನದಲ್ಲೇ
ಅನವರತ ಕುಂಟು ಬಿಲ್ಲೆ
ನೆನಪಿರಲಿ...
ಸೋಲಿರಲಿ ಗೆಲುವಿರಲಿ
ಆಟದ ಸ್ಪೂರ್ತಿಯೇ
ಬೇಕು ಬದುಕಿಗೆಲ್ಲಾ
ಫಲಿತಾಂಶ ಯಾಕೆ ಬೇಕು
ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ !
Tuesday, December 16, 2008
ಸರಿತೆ
ಸೊಗಸಾದ ಕಲ್ಪನೆಯಾದೆ
ಮುತ್ತಂಥ ಅಕ್ಷರವಾದೆ
ಮುದ್ದಾದ ಪದವಾದೆ
ಸವಿಯಾದ ಸಾಲಾದೆ
ಎದೆಯ ಪುಟದಲಿ
ಒಲವಿನ ಕವನವಾದೆ
ರಾಗದಲ್ಲಿ ಬೆರೆತೆ
ಸರಾಗವಾಗಿ ಕುಳಿತೆ
ಸಂಗೀತದ ಆಲಾಪವಾಗಿ
ಬರೆದೆ ಹೊಸ ಚರಿತೆ
ನೆನಪ ಸ್ಮೃತಿಯಲಿ
ನೀನಾದೆ ಹರಿವ ಸರಿತೆ
ಮುತ್ತಂಥ ಅಕ್ಷರವಾದೆ
ಮುದ್ದಾದ ಪದವಾದೆ
ಸವಿಯಾದ ಸಾಲಾದೆ
ಎದೆಯ ಪುಟದಲಿ
ಒಲವಿನ ಕವನವಾದೆ
ರಾಗದಲ್ಲಿ ಬೆರೆತೆ
ಸರಾಗವಾಗಿ ಕುಳಿತೆ
ಸಂಗೀತದ ಆಲಾಪವಾಗಿ
ಬರೆದೆ ಹೊಸ ಚರಿತೆ
ನೆನಪ ಸ್ಮೃತಿಯಲಿ
ನೀನಾದೆ ಹರಿವ ಸರಿತೆ
Wednesday, October 01, 2008
ಕಾಗದದ ದೋಣಿ
ಕಾಗದದ ದೋಣಿ ಇದು ...
ನೆನೆಯಬಹುದು
ಮುಳುಗಲಾರದು
ಈಗಲೋ ಆಗಲೋ
ಹರಿಯಬಹುದು
ಕೊಂಚವಾದರೂ
ತೇಲದೆ ಇರದು
ಕಾಗದದ ದೋಣಿ ಇದು ...
ಬಹಳ ಚಿಕ್ಕದು
ಕಡಿಮೆ ಬೆಲೆಯದ್ದು
ಇದ ಮಾಡಿದ
ಮನದ ಮುಗ್ಧತೆಯದು
ಬೆಲೆ ಕಟ್ಟಲಾಗದ್ದು
ಕಾಗದದ ದೋಣಿ ಇದು ...
ಬಹು ದೂರ ಸಾಗದು
ನಾವಿಕನಿಲ್ಲ ಇಲ್ಲಿ
ಗುರಿ ತಲುಪಿಸಲು
ಒಬ್ಬಂಟಿ ಯಾನಿ ಇದು
ಗುರಿ ಮುಟ್ಟದೆ
ಅಳಿಯಲೂ ಬಹುದು
ಕಾಗದದ ದೋಣಿ ಇದು ...
ಸಾಟಿಯಲ್ಲ ಹಡಗಿಗೆ
ಇದು ಎಂದೆಂದೂ
ಮುಟ್ಟಲಿಲ್ಲ ಕಡಲಿಗೆ
ನಿಶ್ಚಲ ನೀರೆ ಪರಿಧಿ
ಅದರೊಳಗೇ ಇದು ಬಂಧಿ
ನೆನೆಯಬಹುದು
ಮುಳುಗಲಾರದು
ಈಗಲೋ ಆಗಲೋ
ಹರಿಯಬಹುದು
ಕೊಂಚವಾದರೂ
ತೇಲದೆ ಇರದು
ಕಾಗದದ ದೋಣಿ ಇದು ...
ಬಹಳ ಚಿಕ್ಕದು
ಕಡಿಮೆ ಬೆಲೆಯದ್ದು
ಇದ ಮಾಡಿದ
ಮನದ ಮುಗ್ಧತೆಯದು
ಬೆಲೆ ಕಟ್ಟಲಾಗದ್ದು
ಕಾಗದದ ದೋಣಿ ಇದು ...
ಬಹು ದೂರ ಸಾಗದು
ನಾವಿಕನಿಲ್ಲ ಇಲ್ಲಿ
ಗುರಿ ತಲುಪಿಸಲು
ಒಬ್ಬಂಟಿ ಯಾನಿ ಇದು
ಗುರಿ ಮುಟ್ಟದೆ
ಅಳಿಯಲೂ ಬಹುದು
ಕಾಗದದ ದೋಣಿ ಇದು ...
ಸಾಟಿಯಲ್ಲ ಹಡಗಿಗೆ
ಇದು ಎಂದೆಂದೂ
ಮುಟ್ಟಲಿಲ್ಲ ಕಡಲಿಗೆ
ನಿಶ್ಚಲ ನೀರೆ ಪರಿಧಿ
ಅದರೊಳಗೇ ಇದು ಬಂಧಿ
Monday, June 02, 2008
ನೀ ನನ್ನ ಪಾಲಿಗೆ
ಈ ಹೃದಯ ಪಿಸುಗುಟ್ಟಲು
ಮೌನ ಮಾತಾಯಿತು
ನಿನ್ನ ನೆನಪು ಮನ ಸೇರಲು
ದುಃಖ ಬರಿದಾಯಿತು
ನಿನ್ನ ಕಾಣುವ ಹಂಬಲಕೆ
ಹಗಲು ಹರಿಸಿತು ಸೆಳೆಮಿಂಚು
ನಿನ್ನ ಸೆಳೆವ ಉಪಾಯಕೆ
ಕತ್ತಲು ಕಟ್ಟಿತು ಒಳಸಂಚು
ಸುಳಿಯು ಸುಳಿದಾಡದು
ನೀ ನಿಂತ ಮನದ ಮಡುವಲ್ಲಿ
ಅಳಿವಿಲ್ಲ ನನಗೆ ಇದ್ದಷ್ಟು ದಿನ
ನಿನ್ನಾಸರೆಯ ಮಡಿಲಲ್ಲಿ
ನಲುಮೆಯ ಬದುಕಿದು ಒಗಟು
ಬಿಡಿಸು ಬಾ ಈ ಕಗ್ಗಂಟು
ಕಾರಿರುಳ ಕಾನನವು ಕತ್ತಲ ಕೂಪ
ಬೆಳಗಿಸೆ ಇರುಳ ಹೊತ್ತಿಸು ಒಲವಿನ ದೀಪ
ನಸುಗಂಪು ಹೂ ಸೂಸಿದೆ
ಈ ಕಲ್ಪನೆಯೇ ಹೊಸದಾಗಿದೆ
ಪ್ರತೀ ಕಲ್ಪನೆ ನಿನ್ನ ನೆನಪಂತಿದೆ
ಆ ನೆನಪೇ ಹಸಿರಾಗಿದೆ
ದಾಟಿ ಬಾ ಸಪ್ತ ಶರಧಿಗಳ
ಮೀಟಿ ಬಾ ಸುಪ್ತ ಭಾವಗಳ
ಕನಸು ನನಸಾಗುವ ಘಳಿಗೆಗೆ
ಸೇರಿ ಬಿಡು ನೀ ನನ್ನ ಪಾಲಿಗೆ
ಮೌನ ಮಾತಾಯಿತು
ನಿನ್ನ ನೆನಪು ಮನ ಸೇರಲು
ದುಃಖ ಬರಿದಾಯಿತು
ನಿನ್ನ ಕಾಣುವ ಹಂಬಲಕೆ
ಹಗಲು ಹರಿಸಿತು ಸೆಳೆಮಿಂಚು
ನಿನ್ನ ಸೆಳೆವ ಉಪಾಯಕೆ
ಕತ್ತಲು ಕಟ್ಟಿತು ಒಳಸಂಚು
ಸುಳಿಯು ಸುಳಿದಾಡದು
ನೀ ನಿಂತ ಮನದ ಮಡುವಲ್ಲಿ
ಅಳಿವಿಲ್ಲ ನನಗೆ ಇದ್ದಷ್ಟು ದಿನ
ನಿನ್ನಾಸರೆಯ ಮಡಿಲಲ್ಲಿ
ನಲುಮೆಯ ಬದುಕಿದು ಒಗಟು
ಬಿಡಿಸು ಬಾ ಈ ಕಗ್ಗಂಟು
ಕಾರಿರುಳ ಕಾನನವು ಕತ್ತಲ ಕೂಪ
ಬೆಳಗಿಸೆ ಇರುಳ ಹೊತ್ತಿಸು ಒಲವಿನ ದೀಪ
ನಸುಗಂಪು ಹೂ ಸೂಸಿದೆ
ಈ ಕಲ್ಪನೆಯೇ ಹೊಸದಾಗಿದೆ
ಪ್ರತೀ ಕಲ್ಪನೆ ನಿನ್ನ ನೆನಪಂತಿದೆ
ಆ ನೆನಪೇ ಹಸಿರಾಗಿದೆ
ದಾಟಿ ಬಾ ಸಪ್ತ ಶರಧಿಗಳ
ಮೀಟಿ ಬಾ ಸುಪ್ತ ಭಾವಗಳ
ಕನಸು ನನಸಾಗುವ ಘಳಿಗೆಗೆ
ಸೇರಿ ಬಿಡು ನೀ ನನ್ನ ಪಾಲಿಗೆ
Tuesday, April 22, 2008
ಹಕ್ಕಿಯ ಗೂಡು
ಹಕ್ಕಿಯ ಗೂಡು
ಹೇಗಿದೆ ನೋಡು
ಪುಟ್ಟ ಮರಿಗಳ
ತನ್ನೋಡಲಲ್ಲಿ
ಸಲಹುತ
ನಗುವುದು ನೋಡಲ್ಲಿ
ಹಾರದ ಮರಿಗಳ
ಬೀಳಿಸದೆ
ತಾಯಿಯ ನಂಬಿಕೆ
ಹುಸಿಮಾಡದೆ
ಕಾಲವ ಕಳೆವುದು
ಚಿಂತಿಸದೆ
ರೆಕ್ಕೆ ಬಲಿತ ಹಕ್ಕಿ
ಪುರ್ರನೆ ಹಾರಿ
ಗೂಡಿನ ಪ್ರೀತಿಯ
ಗಾಳಿಗೆ ತೂರಿ
ಮೇಲೆರುವುದು
ಗೂಡಿನ ಕೈ ಜಾರಿ
ನಗುತ ತೋರುತ ಸ್ವಾಗತ
ಹೊಸ ಮರಿಗಳಿಗೆ
ಆಶ್ರಯವಾಗಿ
ಅದುವೇ ಪ್ರೀತಿಯ ತೋರುತ
ಹಾಗೆ ಇರುವುದು
ಬೆಚ್ಚನೆ ಗೂಡಾಗಿ
ಹೇಗಿದೆ ನೋಡು
ಪುಟ್ಟ ಮರಿಗಳ
ತನ್ನೋಡಲಲ್ಲಿ
ಸಲಹುತ
ನಗುವುದು ನೋಡಲ್ಲಿ
ಹಾರದ ಮರಿಗಳ
ಬೀಳಿಸದೆ
ತಾಯಿಯ ನಂಬಿಕೆ
ಹುಸಿಮಾಡದೆ
ಕಾಲವ ಕಳೆವುದು
ಚಿಂತಿಸದೆ
ರೆಕ್ಕೆ ಬಲಿತ ಹಕ್ಕಿ
ಪುರ್ರನೆ ಹಾರಿ
ಗೂಡಿನ ಪ್ರೀತಿಯ
ಗಾಳಿಗೆ ತೂರಿ
ಮೇಲೆರುವುದು
ಗೂಡಿನ ಕೈ ಜಾರಿ
ನಗುತ ತೋರುತ ಸ್ವಾಗತ
ಹೊಸ ಮರಿಗಳಿಗೆ
ಆಶ್ರಯವಾಗಿ
ಅದುವೇ ಪ್ರೀತಿಯ ತೋರುತ
ಹಾಗೆ ಇರುವುದು
ಬೆಚ್ಚನೆ ಗೂಡಾಗಿ
Saturday, March 29, 2008
ನಗು
ಸಿಗಬಹುದು ಚಿಂತೆಯ
ಸಂತೆಯಲ್ಲೂ ನಗುವೆಂಬ
ಗುಳಿಗೆ
ದೂರವಿಲ್ಲ ಆ ನಗುವು
ನಮ್ಮದಾಗುವ
ಘಳಿಗೆ
ಹಣ್ಣೆಲೆ ಉದುರಿದ ಮೇಲೆ
ಚಿಗುರದೆ ಇರದು
ಚಿಗುರೆಲೆ
ದುಗುಡ ದೂರವಿಟ್ಟು
ಮತ್ತೆ ನಗುವ
ಈಗಲೇ
.
ಸಂತೆಯಲ್ಲೂ ನಗುವೆಂಬ
ಗುಳಿಗೆ
ದೂರವಿಲ್ಲ ಆ ನಗುವು
ನಮ್ಮದಾಗುವ
ಘಳಿಗೆ
ಹಣ್ಣೆಲೆ ಉದುರಿದ ಮೇಲೆ
ಚಿಗುರದೆ ಇರದು
ಚಿಗುರೆಲೆ
ದುಗುಡ ದೂರವಿಟ್ಟು
ಮತ್ತೆ ನಗುವ
ಈಗಲೇ
.
ನಕ್ಕು ನಗಿಸಿ
ನಗುವವರ ಮುಖದಲಿ
ನಗುವಾಗುವ
ಮರೆಯಿಸೆ ದುಃಖ
ಮನತಣಿಸುವ
ಹಾಡಾಗುವ
Sunday, March 23, 2008
ಹೀಗೊಂದು ನೋವು
ನಿನಗೆ ......
ಬರಿದಾಗದು
ಹೃದಯದ ಕೊಳ
ಮೊಗೆದಷ್ಟು ಪ್ರೀತಿ....
ಸಿಹಿ ನೀರ ಸವಿಯುವ
ಭಾಗ್ಯ ನಿರಂತರ...
ನನಗೆ......
ಕೈಗೆಟುಗದು
ಇಲ್ಲೇ ಇರುವ
ಪ್ರೀತಿ ಮರದ ಫಲ...
ಕಹಿ ನೆನಪಲ್ಲಿ ಮೀಯುವ
ಪಾಪ ನಿರಂತರ....
ನಿನಗಾಗಿ.....
ಮೀಸಲಿದೆ
ಹಸಿ ಪ್ರೀತಿ
ಬೆಚ್ಚನೆ ಆಸರೆ
ಕಣ್ ಗಾವಲಿನಲ್ಲಿ
ನೀ ನನ್ನ ಕೈ ಸೆರೆ...
ನನಗೇಕೆ.....
ಬೇಡದ
ಹುಸಿ ಪ್ರೀತಿ
ಅಣಕಿನ ಕೇಕೆ
ಒಲವಿನ ಬೇಲಿ ಇಲ್ಲದೆ
ಬಿರುಕು ನೆಲದಲ್ಲಿ ನಾ ಸೆರೆ...
ಹೀಗೇಕೆ ನೀನು .....
ಸುಮ್ಮನಾದೆ....
ಮಾತಿಗೆ ಸಿಗದೆ
ದೂರವಾದ ಬೆಳಕಂತೆ
ಬಾರದ ಮಳೆಯಂತೆ
ಮೌನದಿ ಕುಳಿತೆ...
ಆದರೂ ನಾನು...
ನಿರೀಕ್ಷಿಸುತ ನಿಂತೆ
ಸುಮ್ಮನಾಗದೆ
ಬೆಳಕಿಗಾಗಿ ಕೂತ ಕತ್ತಲಂತೆ
ಮಳೆಗಾಗಿ ಕಾದ ಧರೆಯಂತೆ
ಬರೆಯುತ ಕವಿತೆ.....
ಬರಿದಾಗದು
ಹೃದಯದ ಕೊಳ
ಮೊಗೆದಷ್ಟು ಪ್ರೀತಿ....
ಸಿಹಿ ನೀರ ಸವಿಯುವ
ಭಾಗ್ಯ ನಿರಂತರ...
ನನಗೆ......
ಕೈಗೆಟುಗದು
ಇಲ್ಲೇ ಇರುವ
ಪ್ರೀತಿ ಮರದ ಫಲ...
ಕಹಿ ನೆನಪಲ್ಲಿ ಮೀಯುವ
ಪಾಪ ನಿರಂತರ....
ನಿನಗಾಗಿ.....
ಮೀಸಲಿದೆ
ಹಸಿ ಪ್ರೀತಿ
ಬೆಚ್ಚನೆ ಆಸರೆ
ಕಣ್ ಗಾವಲಿನಲ್ಲಿ
ನೀ ನನ್ನ ಕೈ ಸೆರೆ...
ನನಗೇಕೆ.....
ಬೇಡದ
ಹುಸಿ ಪ್ರೀತಿ
ಅಣಕಿನ ಕೇಕೆ
ಒಲವಿನ ಬೇಲಿ ಇಲ್ಲದೆ
ಬಿರುಕು ನೆಲದಲ್ಲಿ ನಾ ಸೆರೆ...
ಹೀಗೇಕೆ ನೀನು .....
ಸುಮ್ಮನಾದೆ....
ಮಾತಿಗೆ ಸಿಗದೆ
ದೂರವಾದ ಬೆಳಕಂತೆ
ಬಾರದ ಮಳೆಯಂತೆ
ಮೌನದಿ ಕುಳಿತೆ...
ಆದರೂ ನಾನು...
ನಿರೀಕ್ಷಿಸುತ ನಿಂತೆ
ಸುಮ್ಮನಾಗದೆ
ಬೆಳಕಿಗಾಗಿ ಕೂತ ಕತ್ತಲಂತೆ
ಮಳೆಗಾಗಿ ಕಾದ ಧರೆಯಂತೆ
ಬರೆಯುತ ಕವಿತೆ.....
Saturday, March 01, 2008
ನಾನು-ನೀನು
ನೆನಪಿನ ಪುಟದ
ಬಿಳಿ ಹಾಳೆಯಲ್ಲಿ
ಹೊಸ ಚಿತ್ರ ನೀನು
ಹಳೆಯ ಬಣ್ಣ ನಾನು
ದೂರದಾಚೆಯ ಕಾನನದ
ಮಡಿಲಲ್ಲಿ
ನಿತ್ಯ ಹಸಿರು ನಿನ್ನದು
ಅಲ್ಲಿರುವ ಉಸಿರು ನನ್ನದು
.
ಸವಿ ಜೇನ ಕೊಳದ
ನಡುವಿನಲ್ಲಿ
ಅರಳಿದ ನೈದಿಲೆ ನಿನ್ನ ಕಂಗಳು
ನಾನು ಅರಳಿಸುವ ಬೆಳದಿಂಗಳು
.
ಕನಸಿನ ಲೋಕದ
ಹೂದೋಟದಲ್ಲಿ
ಕೆಂಪು ಗುಲಾಬಿಯು ನಿನ್ನಧರ
ನಾನದರ ಭ್ರಮರ
Wednesday, February 06, 2008
Unknown Feeling!
Saw it
Ignored it
Did not realize
What is it..!
No loss
No gain
Left over
Is just pain
Fractured mind
Is complete blind
Waiting for
A path of kind
Ignored it
Did not realize
What is it..!
No loss
No gain
Left over
Is just pain
Fractured mind
Is complete blind
Waiting for
A path of kind
Thursday, January 17, 2008
ಒಲವು
ಭಕ್ತಿಯ ಅಲೆ
ಮುಕ್ತಿಯ ತೀರಕೆ
ಪ್ರೀತಿಯ ಕಲೆ
ನಲ್ಮೆಯ ಜೀವಕೆ
ಜೇನ ನದಿಯಲ್ಲಿ
ಒಲುಮೆಯ ನೌಕೆ
ಮೀನ ಹೆಜ್ಜೆಯಲಿ
ಮನದಾಳದ ಬಯಕೆ
ಆಸೆಗಳೇ ಬಸಿರಾಗಿ
ಭಾವಗಳೇ ಉಸಿರಾಗಿ
ನೆನಪಾದವು ಹಸಿರು
ಒಲವು ಅದರ ಹೆಸರು
ಮುಕ್ತಿಯ ತೀರಕೆ
ಪ್ರೀತಿಯ ಕಲೆ
ನಲ್ಮೆಯ ಜೀವಕೆ
ಜೇನ ನದಿಯಲ್ಲಿ
ಒಲುಮೆಯ ನೌಕೆ
ಮೀನ ಹೆಜ್ಜೆಯಲಿ
ಮನದಾಳದ ಬಯಕೆ
ಆಸೆಗಳೇ ಬಸಿರಾಗಿ
ಭಾವಗಳೇ ಉಸಿರಾಗಿ
ನೆನಪಾದವು ಹಸಿರು
ಒಲವು ಅದರ ಹೆಸರು
Monday, December 24, 2007
ಮನಸಿನ್ನೂ ಹಸಿ ಗೋಡೆ....
ಅರ್ಥವಾಗದು ನನಗೆ
ಒಗಟಿನ ಮಾತು
ನಿಮ್ಮ ಪ್ರಬುದ್ಧ ನಡೆ-ನುಡಿ
ವ್ಯರ್ಥ ಜೀವಿ ನಾ
ಕಾರಣ......
ಮನಸಿದು ಹಸಿಗೋಡೆ...!
ಒಲಿಯದು ನನಗೆ
ಸಂಸ್ಕಾರ ಪಾಠ
ನಿಮ್ಮ ಜಗದ ನೀತಿ-ನಿಯಮ
ನನ್ನ ಪುಟ್ಟ ಜಗತ್ತೇ ಬೇರೆ
ಕಾರಣ.....
ಮನಸಿದು ಹಸಿಗೋಡೆ...!
ಶಕುತಿ ಇಲ್ಲ ನನಗೆ
ತಾಳಲು ಕಟು ಮಾತು
ನಿಮ್ಮ ಹಾಗಿನ ಧೈರ್ಯ
ಹಾಲಿನಂಥ ಮನಸು ಒಡೆದು ಹೋದೀತು
ಕಾರಣ.....
ಮನಸಿದು ಹಸಿಗೋಡೆ...!
ಮುಕುತಿ ಬೇಡ ನನಗೆ
ಸ್ವರ್ಗದ ಬಾಗಿಲಿಗೆ
ಅಲ್ಲ ನಾ ನಿಮ್ಮಂಥ ಆಸ್ತಿಕ
ಭಕುತಿಯೇ ಇಲ್ಲ ನನ್ನ ಪಾಲಿಗೆ
ಕಾರಣ....
ಮನಸಿದು ಹಸಿಗೋಡೆ...!
ನಿಮ್ಮಂತೆ ನಾನಲ್ಲ
ನನ್ನಂತೆ ನೀವಿಲ್ಲ
ಬದುಕಲಾರೆ ನಿಮ್ಮ ಹಾಗೆ ನಾ
ಕ್ರೂರ ಮನಗಳ ನಡುವೆ ಇರೆ ನಾ
ಕಾರಣ...
ಮನಸಿನ್ನೂ ಹಸಿಗೋಡೆ....!!
ಒಗಟಿನ ಮಾತು
ನಿಮ್ಮ ಪ್ರಬುದ್ಧ ನಡೆ-ನುಡಿ
ವ್ಯರ್ಥ ಜೀವಿ ನಾ
ಕಾರಣ......
ಮನಸಿದು ಹಸಿಗೋಡೆ...!
ಒಲಿಯದು ನನಗೆ
ಸಂಸ್ಕಾರ ಪಾಠ
ನಿಮ್ಮ ಜಗದ ನೀತಿ-ನಿಯಮ
ನನ್ನ ಪುಟ್ಟ ಜಗತ್ತೇ ಬೇರೆ
ಕಾರಣ.....
ಮನಸಿದು ಹಸಿಗೋಡೆ...!
ಶಕುತಿ ಇಲ್ಲ ನನಗೆ
ತಾಳಲು ಕಟು ಮಾತು
ನಿಮ್ಮ ಹಾಗಿನ ಧೈರ್ಯ
ಹಾಲಿನಂಥ ಮನಸು ಒಡೆದು ಹೋದೀತು
ಕಾರಣ.....
ಮನಸಿದು ಹಸಿಗೋಡೆ...!
ಮುಕುತಿ ಬೇಡ ನನಗೆ
ಸ್ವರ್ಗದ ಬಾಗಿಲಿಗೆ
ಅಲ್ಲ ನಾ ನಿಮ್ಮಂಥ ಆಸ್ತಿಕ
ಭಕುತಿಯೇ ಇಲ್ಲ ನನ್ನ ಪಾಲಿಗೆ
ಕಾರಣ....
ಮನಸಿದು ಹಸಿಗೋಡೆ...!
ನಿಮ್ಮಂತೆ ನಾನಲ್ಲ
ನನ್ನಂತೆ ನೀವಿಲ್ಲ
ಬದುಕಲಾರೆ ನಿಮ್ಮ ಹಾಗೆ ನಾ
ಕ್ರೂರ ಮನಗಳ ನಡುವೆ ಇರೆ ನಾ
ಕಾರಣ...
ಮನಸಿನ್ನೂ ಹಸಿಗೋಡೆ....!!
Monday, December 17, 2007
ಸತ್ಯ
ಮೌನ ರಾಗದಲ್ಲಿ
ನಿಶಬ್ದ ಗಾನ
ಇದ್ದರೂ ಕೇಳದು
ತೆರೆಯಬೇಕಿದೆ ಮನದ ಕಿವಿ
ಹಳೆಯ ಶಬ್ದಗಳಲ್ಲಿ
ಅದ್ಭುತ ಕವನ!
ಸಾಧ್ಯವಾಗದು ಯಾರಿಗೂ
ಜನ್ಮ ತಾಳಬೇಕಿದೆ ಶ್ರೇಷ್ಠ ಕವಿ!
ಹರಿದ ತಂತಿಯ ವೀಣೆಗೆ
ವೈಣಿಕನ ಹಂಗಿಲ್ಲ
ಸಿಗದು ನಾದ
ಚದುರಿಹೋದ ಅರ್ಥಗಳ ಕವನಕೆ
ಓದುಗನ ಹಂಗಿಲ್ಲ
ಅದು ಬರಿ ಮೊಂಡುವಾದ
ನಿಶಬ್ದ ಗಾನ
ಇದ್ದರೂ ಕೇಳದು
ತೆರೆಯಬೇಕಿದೆ ಮನದ ಕಿವಿ
ಹಳೆಯ ಶಬ್ದಗಳಲ್ಲಿ
ಅದ್ಭುತ ಕವನ!
ಸಾಧ್ಯವಾಗದು ಯಾರಿಗೂ
ಜನ್ಮ ತಾಳಬೇಕಿದೆ ಶ್ರೇಷ್ಠ ಕವಿ!
ಹರಿದ ತಂತಿಯ ವೀಣೆಗೆ
ವೈಣಿಕನ ಹಂಗಿಲ್ಲ
ಸಿಗದು ನಾದ
ಚದುರಿಹೋದ ಅರ್ಥಗಳ ಕವನಕೆ
ಓದುಗನ ಹಂಗಿಲ್ಲ
ಅದು ಬರಿ ಮೊಂಡುವಾದ
Wednesday, November 07, 2007
Wish
ಹೊಸ ಬಾಳಿನ ಹೊಸ ಹೆಜ್ಜೆಗಳು
ಅಚ್ಚಳಿಯದ ಗುರುತಾಗಲಿ
ದೂರ ತೀರದ ಯಾನ
ಸಿಹಿಯಾದ ನೆನಪಾಗಲಿ
ಮನಸಿನ ಬಳ್ಳಿ ಬೆಳೆಯಲಿ ಹಬ್ಬಿ
ನಂಬಿಕೆಯ ಮರವ ತಬ್ಬಿ
ಮರದ ನಡುವೆ ಮೂಡಲಿ
ಕನಸಿನ ಕೋಗಿಲೆಯ ಇಂಚರ
ಅದು ಹಾಡಾಗಿ ಉಳಿಯಲಿ ಅಮರ
ಅಚ್ಚಳಿಯದ ಗುರುತಾಗಲಿ
ದೂರ ತೀರದ ಯಾನ
ಸಿಹಿಯಾದ ನೆನಪಾಗಲಿ
ಮನಸಿನ ಬಳ್ಳಿ ಬೆಳೆಯಲಿ ಹಬ್ಬಿ
ನಂಬಿಕೆಯ ಮರವ ತಬ್ಬಿ
ಮರದ ನಡುವೆ ಮೂಡಲಿ
ಕನಸಿನ ಕೋಗಿಲೆಯ ಇಂಚರ
ಅದು ಹಾಡಾಗಿ ಉಳಿಯಲಿ ಅಮರ
Thursday, October 25, 2007
ಮುಡಿಪು
ಮುಡಿಪಿರಲಿ ನಿನಗೆ
ಸುಡದೇ ಸಾಗುವ
ತಂಪಾದ ಬೇಸಿಗೆ
ಸೊಂಪಾದ ತಂಗಾಳಿಯ ಜೊತೆಗೆ
ಆಗಲಿ ಮನಗಳ ಬೆಸುಗೆ
ನೀನಿರುವಲ್ಲಿ ಇರಲಿ
ಶಾಂತ ಚಿತ್ತದ
ನಿರುಪದ್ರವಿ ಮಳೆಗಾಲದ ಸಿಂಚನ
ಅಲ್ಲಿಯೇ ಹುಟ್ಟಲಿ
ಕೊನೆಯಿಲ್ಲದ ಹೊಸಜೀವನ
ನಿನಗಷ್ಟೇ ಮೂಡಲಿ
ಕೊರೆಯದೇ ಕಾಪಾಡುವ
ನೂತನ ಚಳಿಗಾಲ
ಅಲ್ಲಿ ಬೆಚ್ಚಗೆ ಅರಳಲಿ
ನೆನಪಿನ ಚೈತ್ರ ಕಾಲ
ನೀ ಸಾಗುವ ದಾರಿಯಲಿ
ತೋರದಿರಲಿ ಸೃಷ್ಟಿ ಮುನಿಸು
ತೋರಲಿ ಕರುಣೆ ಈಡೇರಲು
ನಿನ್ನಲ್ಲಿ ನಾನಾಗುವ ಕನಸು
ಸುಡದೇ ಸಾಗುವ
ತಂಪಾದ ಬೇಸಿಗೆ
ಸೊಂಪಾದ ತಂಗಾಳಿಯ ಜೊತೆಗೆ
ಆಗಲಿ ಮನಗಳ ಬೆಸುಗೆ
ನೀನಿರುವಲ್ಲಿ ಇರಲಿ
ಶಾಂತ ಚಿತ್ತದ
ನಿರುಪದ್ರವಿ ಮಳೆಗಾಲದ ಸಿಂಚನ
ಅಲ್ಲಿಯೇ ಹುಟ್ಟಲಿ
ಕೊನೆಯಿಲ್ಲದ ಹೊಸಜೀವನ
ನಿನಗಷ್ಟೇ ಮೂಡಲಿ
ಕೊರೆಯದೇ ಕಾಪಾಡುವ
ನೂತನ ಚಳಿಗಾಲ
ಅಲ್ಲಿ ಬೆಚ್ಚಗೆ ಅರಳಲಿ
ನೆನಪಿನ ಚೈತ್ರ ಕಾಲ
ನೀ ಸಾಗುವ ದಾರಿಯಲಿ
ತೋರದಿರಲಿ ಸೃಷ್ಟಿ ಮುನಿಸು
ತೋರಲಿ ಕರುಣೆ ಈಡೇರಲು
ನಿನ್ನಲ್ಲಿ ನಾನಾಗುವ ಕನಸು
Monday, September 10, 2007
HB
ಎಂದಿಗೂ ಇರಿ
ಚೈತನ್ಯದ ಚಿಲುಮೆಯಾಗಿ
ಮೌನದಾಚೆಯ ಹೊಸ ಮಾತಾಗಿ
ಭಾವ ಬಿಂದುವಿನ ಅರ್ಥವಾಗಿ
ಬದುಕು ಹಸಿರಾಗಲಿ
ಸ್ನೇಹ ಬನದ ಬಯಲಲಿ
ಹೊಸ ಮನ್ವಂತರದ ಹೆಸರಲಿ
ಭವ್ಯ ಭವಿಷ್ಯದ ಉಸಿರಲಿ
ಕೂಡಿಟ್ಟ ಕನಸುಗಳು ನನಸಾಗಲಿ
ಬಾಳಿನ ಪಯಣದಲಿ
ಪಯಣದ ಪ್ರತಿ ಘಳಿಗೆ ಸಿಹಿಯಾಗಿರಲಿ
ಸಿಹಿ ಭರಿತ ಚೈತ್ರಗಳು ನಿಮ್ಮದಾಗಲಿ
ಚೈತನ್ಯದ ಚಿಲುಮೆಯಾಗಿ
ಮೌನದಾಚೆಯ ಹೊಸ ಮಾತಾಗಿ
ಭಾವ ಬಿಂದುವಿನ ಅರ್ಥವಾಗಿ
ಬದುಕು ಹಸಿರಾಗಲಿ
ಸ್ನೇಹ ಬನದ ಬಯಲಲಿ
ಹೊಸ ಮನ್ವಂತರದ ಹೆಸರಲಿ
ಭವ್ಯ ಭವಿಷ್ಯದ ಉಸಿರಲಿ
ಕೂಡಿಟ್ಟ ಕನಸುಗಳು ನನಸಾಗಲಿ
ಬಾಳಿನ ಪಯಣದಲಿ
ಪಯಣದ ಪ್ರತಿ ಘಳಿಗೆ ಸಿಹಿಯಾಗಿರಲಿ
ಸಿಹಿ ಭರಿತ ಚೈತ್ರಗಳು ನಿಮ್ಮದಾಗಲಿ
Tuesday, September 04, 2007
ದ್ವಂದ್ವ
ಅದ್ಭುತವಲ್ಲ ಕಾಲತ್ಮಕತೆಯೂ ಅಲ್ಲ
ಏನೋ ಎಳೆ ಅದು
ಸಿಕ್ಕಂತೆ ಗೀಚಿದ್ಡಾಯಿತು
ಅರ್ಥವಿಲ್ಲದ ಗೆರೆಗಳಿಗೆ
ಜನರಿಟ್ಟ ಹೆಸರು ಮಹಾ ಕಲಾಕೃತಿ!
ಸತ್ವವಿಲ್ಲದ ತತ್ವಗಳು ಇಲ್ಲಿವೆ
ನನಗೇ ಅರ್ಥವಾಗದ
ಪದಗಳ ಲಾಸ್ಯವೂ ತುಂಬಿವೆ
ನಾ ಕಂಡ ಅತಿ ಸಾಮಾನ್ಯ
ಜೀವನ ಗಾಥೆಯ ಪದ ಜೋಡಣೆ
ಓದಿದವರಿಗೆ ಅನಿಸಿತಂತೆ ಅಭೂತಪೂರ್ವ ಕವನ!
ಏನೋ ಎಳೆ ಅದು
ಸಿಕ್ಕಂತೆ ಗೀಚಿದ್ಡಾಯಿತು
ಅರ್ಥವಿಲ್ಲದ ಗೆರೆಗಳಿಗೆ
ಜನರಿಟ್ಟ ಹೆಸರು ಮಹಾ ಕಲಾಕೃತಿ!
ಸತ್ವವಿಲ್ಲದ ತತ್ವಗಳು ಇಲ್ಲಿವೆ
ನನಗೇ ಅರ್ಥವಾಗದ
ಪದಗಳ ಲಾಸ್ಯವೂ ತುಂಬಿವೆ
ನಾ ಕಂಡ ಅತಿ ಸಾಮಾನ್ಯ
ಜೀವನ ಗಾಥೆಯ ಪದ ಜೋಡಣೆ
ಓದಿದವರಿಗೆ ಅನಿಸಿತಂತೆ ಅಭೂತಪೂರ್ವ ಕವನ!
ವಿಪ್ಲವ ಭಾವ
ರುಚಿಸುತಿಲ್ಲ
ನೀಲಾಕಾಶದ ದೈತ್ಯತೆ
ಹಕ್ಕಿಗಳ ನಿನಾದ
ಎಳೆ ಬಿಸಿಲ ಚೆಲ್ಲಾ ಟ
ಹೊಂಬಿಸಿಲ ಸ್ಪರ್ಶಕೆ
ನರ್ತಿಸುವಂತಿರುವ
ಹರಿವ ನೀರ ಕಲರವ
ಸ್ತಬ್ದ ಮೌನವಿದೆ
ನೀ ಮೃದು ಹೆಜ್ಜೆಗುರುತು
ಇಟ್ಟು ಹೋದ ಮನಸಿನಲಿ
ನೆನಪಧಾರೆ ಚೆಲ್ಲಿ
ಹೋದ ಮನೆಯಲಿ
ಬೆಂಬಿಡದೇ ನಿನ್ನಗಲಿಕೆಯ
ನೋವುಂಡು ಬೇಯುತಿರುವ ಬಾಳಲ್ಲಿ
ಒಡಲಾಳದಲ್ಲಿ
ಇನ್ನೂ ಉರಿಯುತಿದೆ
ಮತ್ತೆ ನಿನ್ನ ಬರುವಿಕೆಯ ಸಾರುವ
ದಿವ್ಯ ಪ್ರಣತಿ
ಬಿರುಗಾಳಿಗೂ ನಂದದೆ
ನಕ್ಕು ಹೇಳುವಂತಿದೆ
ಆಶಾಕಿರಣ ವಿರಲು ಇರು ಎದೆಗುಂದದೆ
ಹೇಳಿ ಕಳಿಸಿರುವೆ
ನೀಲಾಕಾಶದಲ್ಲಿ ಜೂಟಾಟವಾಡುವ
ಮುಗ್ಧ ಮೇಘ ಗಳಿಗೆ
ಈಗ ತಾನೇ ಉದಯಿಸಿ
ಎಳೆ ಬಿಸಿಲ ಸೂಸುತಿರುವ ರವಿಗೆ
ಪರಿಧಿ ಇಲ್ಲದೇ ಸಾಗುವ ಹಕ್ಕಿಗಳಿಗೆ
ತಡೆ ಇಲ್ಲದೇ ಹರಿವ ನೀರಿಗೆ
ನಿನ್ನ ಹುಡುಕಲು
ಬಸಿದಿಟ್ಟ ಭಾವನೆಗಳ ತಿಳಿಸಿ
ಮತ್ತೆ ನನ್ನೆಡೆಗೆ ಬರ ಹೇಳಲು
ಆದರೂ ಯಾಕೋ ದುಗುಡವಿದೆ
ಮೇಘಗಳು ಹಾದಿ ತಪ್ಪುವ ಅಪಾಯ
ಹಕ್ಕಿಗಳು ನನ್ನ ಮಾತ ಉಪೇಕ್ಷಿಸುವ ಸಂಶಯ
ರವಿಗೆ ಪುರುಸೊತ್ತಿಲ್ಲವೇನೋ...!
ಹರಿವ ನೀರು ನಿನ್ನ ಅರಸುವಲ್ಲಿ
ಸೋಲ ಬಹುದೇನೋ...!
ಮಂಗಳ ಹಾಡಿ
ಹುಚ್ಚು ಕುದುರೆಯಂತೆ ಓಡುವ
ಈ ಕೆಟ್ಟ ಆಲೋಚನೆಗಳಿಗೆ
ನನ್ನ ಈ ಸ್ನೇಹಿತರ ಜೊತೆಗೂಡಿ
ಬದುಕನ್ನು ಹಸನು ಗೊಳಿಸು ಬಾ ಗೆಳತಿ
ನೀಲಾಕಾಶದ ದೈತ್ಯತೆ
ಹಕ್ಕಿಗಳ ನಿನಾದ
ಎಳೆ ಬಿಸಿಲ ಚೆಲ್ಲಾ ಟ
ಹೊಂಬಿಸಿಲ ಸ್ಪರ್ಶಕೆ
ನರ್ತಿಸುವಂತಿರುವ
ಹರಿವ ನೀರ ಕಲರವ
ಸ್ತಬ್ದ ಮೌನವಿದೆ
ನೀ ಮೃದು ಹೆಜ್ಜೆಗುರುತು
ಇಟ್ಟು ಹೋದ ಮನಸಿನಲಿ
ನೆನಪಧಾರೆ ಚೆಲ್ಲಿ
ಹೋದ ಮನೆಯಲಿ
ಬೆಂಬಿಡದೇ ನಿನ್ನಗಲಿಕೆಯ
ನೋವುಂಡು ಬೇಯುತಿರುವ ಬಾಳಲ್ಲಿ
ಒಡಲಾಳದಲ್ಲಿ
ಇನ್ನೂ ಉರಿಯುತಿದೆ
ಮತ್ತೆ ನಿನ್ನ ಬರುವಿಕೆಯ ಸಾರುವ
ದಿವ್ಯ ಪ್ರಣತಿ
ಬಿರುಗಾಳಿಗೂ ನಂದದೆ
ನಕ್ಕು ಹೇಳುವಂತಿದೆ
ಆಶಾಕಿರಣ ವಿರಲು ಇರು ಎದೆಗುಂದದೆ
ಹೇಳಿ ಕಳಿಸಿರುವೆ
ನೀಲಾಕಾಶದಲ್ಲಿ ಜೂಟಾಟವಾಡುವ
ಮುಗ್ಧ ಮೇಘ ಗಳಿಗೆ
ಈಗ ತಾನೇ ಉದಯಿಸಿ
ಎಳೆ ಬಿಸಿಲ ಸೂಸುತಿರುವ ರವಿಗೆ
ಪರಿಧಿ ಇಲ್ಲದೇ ಸಾಗುವ ಹಕ್ಕಿಗಳಿಗೆ
ತಡೆ ಇಲ್ಲದೇ ಹರಿವ ನೀರಿಗೆ
ನಿನ್ನ ಹುಡುಕಲು
ಬಸಿದಿಟ್ಟ ಭಾವನೆಗಳ ತಿಳಿಸಿ
ಮತ್ತೆ ನನ್ನೆಡೆಗೆ ಬರ ಹೇಳಲು
ಆದರೂ ಯಾಕೋ ದುಗುಡವಿದೆ
ಮೇಘಗಳು ಹಾದಿ ತಪ್ಪುವ ಅಪಾಯ
ಹಕ್ಕಿಗಳು ನನ್ನ ಮಾತ ಉಪೇಕ್ಷಿಸುವ ಸಂಶಯ
ರವಿಗೆ ಪುರುಸೊತ್ತಿಲ್ಲವೇನೋ...!
ಹರಿವ ನೀರು ನಿನ್ನ ಅರಸುವಲ್ಲಿ
ಸೋಲ ಬಹುದೇನೋ...!
ಮಂಗಳ ಹಾಡಿ
ಹುಚ್ಚು ಕುದುರೆಯಂತೆ ಓಡುವ
ಈ ಕೆಟ್ಟ ಆಲೋಚನೆಗಳಿಗೆ
ನನ್ನ ಈ ಸ್ನೇಹಿತರ ಜೊತೆಗೂಡಿ
ಬದುಕನ್ನು ಹಸನು ಗೊಳಿಸು ಬಾ ಗೆಳತಿ
Thursday, August 16, 2007
ಮಧುರ
| ಮನಸೆಂಬ ಮಾಮರದಲ್ಲಿ ಒಲವೆಂಬ ಕೋಗಿಲೆಯ ಇಂಚರ ಮೂಡುವಂತೆ ನಿಮ್ಮ ಬದುಕಾಗಲಿ ಮಧುರ ಸ್ನೇಹ ಸಾಗರದಲ್ಲಿ ನೆನಪಿನ ದೋಣಿಯ ಪಯಣ ಅಮರ ಪಯಣದ ಕ್ಷಣಗಳು ಆಗಿರಲಿ ಮಧುರ |
Tuesday, July 24, 2007
ಹನಿಗಳು
ಮಾತಾಡದೆ ಮೌನ ಮುದ್ರೆ ಹೊತ್ತು,
ಪಲ್ಲವಿ ಇಲ್ಲದ ನಿರ್ಜೀವ ಕವನ ದಲ್ಲಿ
ಅತೀರೇಕ ಎನಿಸುವ ಭಾವುಕತೆ ಹರಿವಂತೆ
ಹತ್ತಿರ ವಿದ್ದರೂ ಮಾತಡದ ಗೆಳತಿ ಒಂದು ಒಗ ಟು
ಅವಳು ಬಿಡಿಸಲಾಗದ ಕಗ್ಗಂಟು
******
ಶೂನ್ಯ ದಲ್ಲಿ ಬೆರೆಯುವ ಭಾವ
ಅನಂತತೆಯಲಿ ನಿರಂತರತೆಯ
ಹುಡುಕುವ ಹುಚ್ಚು ಮನಸು
ತಾರೆಯ ಅಂಚಿನಲ್ಲಿ ಪುಟ್ಟ ಗೂಡು
ಕಟ್ಟುವ ಅಸಾಧ್ಯ ಕಲ್ಪನೆ....!
ಕೊನೆಯಿಲ್ಲ ಗೆಳತಿ ನನ್ನ ಬೆಪ್ಪು ಭ್ರಮೆ ಗಳಿಗೆ....!!
***
ನೂರೊಂದು ಭಾವನೆಗಳು
ಮಿಳಿತಗೊಂಡು ಹತ್ತಾರು
ಕವನ ಗಳಾದವು
ಸಮಯವಿಲ್ಲದೇ ಯಾರಿಗೂ ಓದಲು
ಅನಿವಾರ್ಯವಾಗಿ ಮನಸ್ಸಿನ ಆ ಭಾವನೆಗಳ
ಗೊಂಚಲು ಮಣ್ಣು ಪಾಲಾದವು..!
****
ಬೀಜ ಗಿಡ ವಾಯಿತು
ಸೊಂಪಾಗಿ ಬೆಳೆಯಿತು
ನಸು ನಗುವ ಗುಲಾಬಿಯೂಂದು ಅರಳಿಬಿಟ್ಟಿತು
ತಾಯಿ ಬೇರು ತನ್ನ ಮಗುವನ್ನು ರಕ್ಷಿಸಲು
ಮುಳ್ಳುಗಳಿಗೆ ಹೇಳಿ
ಭೂಮಿಯಲ್ಲಿ ಹೂತು ಹೋದಳು
ಓದುವ ನದಿಯನ್ನೇ ತಡೆ ವವನಿಗೆ
ಮುಳ್ಳುಗಳು ಭಯ ಎಲ್ಲಿದೆ...?
ಸುಂದರ ಗುಲಾಬಿ ಕಿತ್ತುಕೊಂಡು ಹೋದ ಮಾನವ
ತಾಯಿ ಬೇರು ಅತ್ತಳೋ ಬಿಟ್ಟಳೋ ತಿಳಿಯದಾಗಿದೆ..!
Subscribe to:
Posts (Atom)
