Thursday, April 01, 2010
ಕವನದ ಆಕ್ರಂದನ
ಇದು ಪುಟ್ಟ ಕವನ...
ಅದರೊಳಗೇ
ಬಚ್ಚಿಟ್ಟುಕೊಂಡಿದೆ..
ತನ್ನ ಮೌನ ಆಕ್ರಂದನ...
ನಾಲ್ಕೇ ಸಾಲುಗಳ
ಅಪಕ್ವ ವೆನಿಸುವ ನುಡಿಗಳು..
ಆದರೂ.. ತನ್ನೊಳಗೆ..
ಅಡಗಿಸಿದ
ಯಾರೂ ಅರ್ಥೈಸದ ...
ಯಾರಿಗೂ ಬೇಡದ
ಸಾವಿರಾರು..
ಪರಿಪಕ್ವ ವಿಚಾರಗಳ..
ಕೋಟ್ಯಾಂತರ ನಿಟ್ಟುಸಿರುಗಳ
ಒಳಗೊಂಡ ಪುಟ್ಟ ಕವನ..
ಜೊತೆಗೆ ತನ್ನ ಮೌನ ಆಕ್ರಂದನ..
ತುಟಿಯಾಚೆ ಬಾರದೆ...
ಮನದೊಳಗೆ ಕೂರದೆ...
ಸದ್ದೇ ಮಾಡದಂತೆ
ಇದ್ದೂ ಇಲ್ಲದಂತೆ...
ಇಲ್ಲದೆಯೂ ಇರುವಂತೆ...
ತನ್ನ ಅಸ್ತಿತ್ವವನ್ನೇ..
ಪ್ರಶ್ನಿಸಿಕೊಳ್ಳುವ ಕವನ..!
ಅಗೋಚರ ಪದಗಳ..
ಅಚ್ಚರಿಯ ಅರ್ಥಗಳ..
ಒಮ್ಮೆಲೇ.. ಒಳಗೊಂಡ ಪುಟ್ಟ ಕವನ..
ಜೊತೆಗೆ ತನ್ನ ಮೌನ ಆಕ್ರಂದನ....
Tuesday, February 09, 2010
ಕೇವಲ ನೆನಪಿಗಾಗಿ..
ಮನವೇ ಪ್ರಕೃತಿ..
ಆಗಸವೇ ನಿರೀಕ್ಷೆ...
ಭಾವವೇ ಸಾಗರ
ಕನಸಿನ ತೀರದಲ್ಲೇ
ಆಸೆಗಳ
ಮರಳ ಗೂಡು...
ಕಲ್ಪನೆಗಳೇ
ಆಗಾಗ ಮೂಡುವ
ಅಲೆಗಳಂತೆ....
ಎಲ್ಲವೂ ಸರಿ ಇದ್ದರೆ...
ಮನದ ಪ್ರಕೃತಿ
ನಗುತಲೇ ಇದ್ದರೆ...
ಆಸೆಗಳ ಮರಳ ಗೂಡು
ಹಾಗೇ ಉಳಿಯಬಹುದು
ಎಂದಿಗೂ ಅಳಿಯದ
ನೆನಪಿನ ಕೃತಿಯಾಗಿ...
ಅಕಸ್ಮಾತ್...
ಮನದ ಪ್ರಕೃತಿ ಮುನಿದು....
ಭಾವಗಳ ಸಾಗರ
ಹುಚ್ಚಾಗಿ ಕುಣಿದು...
ಕಲ್ಪನೆಗಳ ಸುನಾಮಿ ಅಲೆಗಳು..
ಭೋರ್ಗರೆದು ಅಪ್ಪಳಿಸಿದರೆ...
ಆಸೆಗಳ ಮರಳ ಗೂಡು
ಕೊಚ್ಚಿ ಹೋಗಬಹುದು...
ಅಳಿದು ಹೋಗಿ
ಕಾಡಬಹುದು..
ಕೇವಲ ನೆನಪಾಗಿ... !
ಕೊನೆಗೆ ....
ಉಳಿಯುವುದು...
ಆಗಸವೆಂಬ ನಿರೀಕ್ಷೆ ಮಾತ್ರ...
ಆಗಸ ಎಂದಿಗೂ ಅಳಿಯದ ಅಚ್ಚರಿ...
ಮತ್ತೆ ಮರಳ ಗೂಡು ಕಟ್ಟಬೇಕೆ... ?
ಪ್ರಕೃತಿ ಸಿದ್ಧಳಾಗುವ ವರೆಗೂ ಕಾಯಬೇಕು ...
ಅಲ್ಲಿಯವರೆಗೂ...
ನಿರೀಕ್ಷೆಯ ಆಗಸವನ್ನೇ ನೋಡಬೇಕು..
ಕೇವಲ ನೆನಪಿಗಾಗಿ..
ಆಗಸವೇ ನಿರೀಕ್ಷೆ...
ಭಾವವೇ ಸಾಗರ
ಕನಸಿನ ತೀರದಲ್ಲೇ
ಆಸೆಗಳ
ಮರಳ ಗೂಡು...
ಕಲ್ಪನೆಗಳೇ
ಆಗಾಗ ಮೂಡುವ
ಅಲೆಗಳಂತೆ....
ಎಲ್ಲವೂ ಸರಿ ಇದ್ದರೆ...
ಮನದ ಪ್ರಕೃತಿ
ನಗುತಲೇ ಇದ್ದರೆ...
ಆಸೆಗಳ ಮರಳ ಗೂಡು
ಹಾಗೇ ಉಳಿಯಬಹುದು
ಎಂದಿಗೂ ಅಳಿಯದ
ನೆನಪಿನ ಕೃತಿಯಾಗಿ...
ಅಕಸ್ಮಾತ್...
ಮನದ ಪ್ರಕೃತಿ ಮುನಿದು....
ಭಾವಗಳ ಸಾಗರ
ಹುಚ್ಚಾಗಿ ಕುಣಿದು...
ಕಲ್ಪನೆಗಳ ಸುನಾಮಿ ಅಲೆಗಳು..
ಭೋರ್ಗರೆದು ಅಪ್ಪಳಿಸಿದರೆ...
ಆಸೆಗಳ ಮರಳ ಗೂಡು
ಕೊಚ್ಚಿ ಹೋಗಬಹುದು...
ಅಳಿದು ಹೋಗಿ
ಕಾಡಬಹುದು..
ಕೇವಲ ನೆನಪಾಗಿ... !
ಕೊನೆಗೆ ....
ಉಳಿಯುವುದು...
ಆಗಸವೆಂಬ ನಿರೀಕ್ಷೆ ಮಾತ್ರ...
ಆಗಸ ಎಂದಿಗೂ ಅಳಿಯದ ಅಚ್ಚರಿ...
ಮತ್ತೆ ಮರಳ ಗೂಡು ಕಟ್ಟಬೇಕೆ... ?
ಪ್ರಕೃತಿ ಸಿದ್ಧಳಾಗುವ ವರೆಗೂ ಕಾಯಬೇಕು ...
ಅಲ್ಲಿಯವರೆಗೂ...
ನಿರೀಕ್ಷೆಯ ಆಗಸವನ್ನೇ ನೋಡಬೇಕು..
ಕೇವಲ ನೆನಪಿಗಾಗಿ..
Tuesday, December 15, 2009
ಹಾಡು ನನ್ನ ಚರಮ ಗೀತೆ..
ಈ ಜೀವ ದೇಹದಿಂದ ಹಾರಲು
ಆತ್ಮ ಚಿತೆಯಿಂದ ಹೊರಡಲು
ನಾಚುವಂತೆ..
ನನ್ನದೇ ಕವಿತೆ..
ಹಾಡು ನನ್ನ ಚರಮ ಗೀತೆ..
ತಣಿಯಲಿ ಈ ಆತ್ಮ
ಕುಣಿಯಲಿ ಎನ್ನ ಚೇತನ..
ಹರಿಯುವಂತೆ...
ಸುಪ್ತ ಸರಿತೆ..
ಹಾಡು ನನ್ನ ಚರಮ ಗೀತೆ...
ಬದುಕಿಗೆ ಅರ್ಥ ಬರುವಂತೆ ...
ಕೆದಕಿದ ನೋವು ಸುಡುವಂತೆ..
ಮೂಡುವಂತೆ..
ಹೊಸ ಚರಿತೆ...
ಹಾಡು ನನ್ನ ಚರಮ ಗೀತೆ..
ಅಂತರಾತ್ಮ ಅರಿವಂತೆ..
ತಪ್ತ ಭಾವದ ಕುರಿತಂತೆ..
ಈ ಬಾಳ ಜಂಜಾಟದ...
ಒಗಟು ಬಿಡಿಸುವಂತೆ..
ಹಾಡು ನನ್ನ ಚರಮ ಗೀತೆ....
ಈ ಆತ್ಮ ಜನ್ಮ ತಳೆವಂತೆ...
ಮತ್ತೆ ಎಲ್ಲೋ ಹುಟ್ಟಿ ಬೆಳೆವಂತೆ..
ಹರಸಿ ಕೂಗು ....
ಮತ್ತೆ ಮತ್ತೆ....
ಹಾಡು ನನ್ನ ಚರಮ ಗೀತೆ..!
Tuesday, November 03, 2009
ನೀ ನನಗೆ ... ನಾ ನಿನಗೆ...
ನಿನ್ನೊಳಗೆ ನಾನಾಗಿ
ನನ್ನ ನಾ ನಿನಗಾಗಿ
ನೀಡಿ
ನಿನ್ನಲ್ಲೇ ನರ್ತಿಸುವೆ
ನಿನ್ನೋಲವೇ ನಾನಾಗುವೆ
ನನದೇನು..?
ನನಗಿರುವುದೇನು...?
ನೀನೆ ನನ್ನ ನಲಿವು ...
ನೀನೆ ನನ್ನ ನಗುವು...
ನಿನಗಾಗಿ ನಾನು
ನನಗಾಗಿ ನೀನು
ನನ್ನೆದೆಯಲ್ಲಿ ನೀ ನೇಗಿಲು
ನಿನ್ನೆದೆಯಲ್ಲಿ ನಾ ನೆರಳು
ನಾನು ನೀಲಾಕಾಶ
ನೀನಲ್ಲಿರೋ ನಕ್ಷತ್ರ
ನಾ ನಿನಗೆ ನಕ್ಷೆ..
ನೀ ನನಗೆ ನಿರೀಕ್ಷೆ ...
Thursday, October 29, 2009
ಅವಳ ಹೆಸರು
ಅಗ್ನಿಯೂ ಸುಟ್ಟುಹೋಗುವ ಕೋಪ
ಧರಿತ್ರಿಗೂ ಮೀರಿದ ಮೌನ
ಕೊಂಡು ತಂದವಳು
ನನ್ನ ಉಸಿರು
ಗೆಳತಿ ಅವಳ ಹೆಸರು
ಹೂವನು ಮೀರಿದ ಕಂಪು
ಇವಳು ಮಂಜಿಗಿಂತ ತಂಪು
ನನ್ನೆದೆಯ ಮಡುವಿನ ಕಮಲ
ಅರಳಿದಳು ಸೋಕಿಸದೆ ಕೆಸರು
ಮಡದಿ ಅವಳ ಹೆಸರು
ದೀಪದಾರತಿಯ ಬೆಳಕು
ಕಾರಿರುಳ ಕಳೆವ ಹೊಳಪು
ಹೊತ್ತು ಬರುವವಳ
ಮನ ಹಸಿರು
ಹೆಣ್ಣು ಅವಳ ಹೆಸರು
ತೊಡೆದು ಪುರುಷನ ವಿಕೃತಿ
ಕಲಿಸಿ ಬಾಳಿಗೆ ಸಂಸ್ಕೃತಿ
ಸಲಹುವವಳ
ಬದುಕು ಕೆನೆ ಮೊಸರು
ಪ್ರಕೃತಿ ಅವಳ ಹೆಸರು...
Monday, September 21, 2009
ಬಿನ್ನಹ ಮುಗಿಲಿಗೆ
ಮಳೆಯಿಲ್ಲದ ನೆಲದಲ್ಲಿ
ಕನಸಿಗೂ ಬರಗಾಲ
ಜೀವನ ಪರ್ಯಂತ..
ಬಿರುಕಿದ ಇಳೆಯಲ್ಲಿ
ಕುಸಿದು ಬಿದ್ದ ದನಿಯ
ಮೌನ ಪ್ರಾರ್ಥನೆ ..
ಅದರ ಆಸೆ ಜೀವಂತ
ಬಾರದ ಮಳೆಯಿಂದ
ತಂಪಾಗಿಲ್ಲ ಇಳೆ
ಒಡಲು ಖಾಲಿ ಖಾಲಿ
ಒಲುಮೆಯ ಮರದ
ಎಲೆಗಳು ಉದುರಿವೆ
ಮತ್ತೆ ಬಿಕ್ಕಿ ಬಿಕ್ಕಿ
ಬಿರುಗಾಳಿಗೆ ತೇಲಿ
ದೂರದೂರಿಂದ ಮುಗಿಲ
ಸವಾರಿ ಇಲ್ಲೇ ನುಗ್ಗಿದಂತೆ
ಜೀವದ ಕರೆಗೆ
ಛೆ! ನಾಲ್ಕು ಹನಿಯನ್ನೂ
ಚಿಮುಕಿಸದೆ
ಹೊರಟ ವೇಕೋ
ಮತ್ತೆ ತೆರೆಮರೆಗೆ
ಓ ಮುಗಿಲೇ ಮುನಿದೆಹೆ ಏಕೆ
ಬಾರದೆ ನಮ್ಮೀ ನೆಲಕೆ
ಕರಗಿ ಉದುರಲು
ನಿನಗೂ ತೆರಬೇಕೆ ಸುಂಕ ?
ಕರುಣಿಸಿ ಕರಗು
ತಣಿಯಲಿ ಧರೆ
ಎಂದೂ ತೋರದೆ ಬಿಂಕ..
Tuesday, August 25, 2009
ನಿನ್ನೊಡನೆ ಅಂದು
ಸಿಗಬೇಕಿದೆ ಭಾವ ತಂತು
ಮಿಡಿಯಲು ಶ್ರಾವ್ಯ ನಾದ
ಕಾಯುತಿದೆ ನಿನಗಾಗಿ ಕಾದ
ಜೀವವಿದು ಇಲ್ಲೇ ನಿಂತು
ನಿನ್ನ ನಗು ಮೊಗ ನೋಡಿ
ನಾ ಅಂದು ಕಲಿತ ಹೊಸ ರಾಗ
ನಿನ್ನ ನುಡಿಯೆಂಬ ಶ್ರುತಿಯ
ಹುಡುಕಿ ಹೊರಟಿದೆ
ನನ್ನೆದೆಯ ಗೂಡಿಗೆ
ಸೋಕಿ ಹೋದ ಆ ಕ್ಷಣವು
ಇತಿಹಾಸದ ಪುಟದಲ್ಲಿ ಅಮರವಾಗಿದೆ
ನನ್ನ ಗಲ್ಲ ಸವರಿ ಹೋದ
ನಿನ್ನ ತುರುಬಿನ ಮಲ್ಲಿಗೆ
ನಾಚಿ ಕೆಂಪಾದಾಗಲೇ
ಅದರ ಪರಿಮಳ ದುಪ್ಪಟ್ಟಾಯಿತು
ನಿನ್ನ ಸೆರಗಲ್ಲಿ ಗಂಟು ಕಟ್ಟಿದ
ನನ್ನ ಪ್ರೀತಿಯ ಒಗಟನ್ನು
ನೀನು ಬಿಚ್ಚಿ ಬಿಡಿಸಿದ ಕಲೆಯೇ
ನನಗಾದ ಜ್ಞಾನೋದಯ
ಉಸಿರುಸಿರು ಒಂದಾದಾಗಲೇ
ಅರಿತುಕೊಂಡೆ ನೀನನ್ನ ದೇವತೆ
ನೀ ಹಡೆದ ಹೊಸ ಜೀವ
ನಮ್ಮ ಬದುಕಿನ ಕಲರವ
Friday, June 19, 2009
ಮಳೆಯಲ್ಲಿ ನೆಂದು....
ಗೋಧೂಳಿ ಸಮಯ ತುಸು ಜಾರಿ
ಕಾರ್ಗತ್ತಲು ಅರಳುವ ಸಮಯ....
ಭೂ-ಬಾನು ಒಂದಾಗಿ ಮಾಡಲೆಂದೇ
ಬಂದನೇನೋ ಈ ಮಳೆರಾಯ...!
ನೆಂದು ಹೋದೆ
ಆ ಇಳೆಗಿಳಿದ ಮಳೆಗೆ
ಮಿಂದು ಹೋದೆ
ಅದು ತಂದ ಚಳಿಗೆ
ಅಂದವಿತ್ತು ಆ ಮಿಂಚು
ಮೋಡಗಳ ನಡುವೆ
ಮಿಂಚಿ ಮರೆಯಾಗುವ ಆ ಅಲ್ಪ ಕ್ಷಣ !
ಜೊತೆಗೆ...
ಎದೆಗೆ ಝಲ್ಲನೆ ಈಟಿ ಹೊಕ್ಕಂತೆ
ಸಿಡಿಲ ನರ್ತನ !
ಈ ನಡುವೆ ಕಾಣದ ಗೆಳತಿಯೋರ್ವಳ
ದೂರವಾಣಿ ಕರೆ!
ಅಸ್ಪಷ್ಟ ದನಿಯೊಂದಿಗೆ
ಉಭಯ ಕುಶಲೋಪರಿ!
ಈಗ ನೆಂದದ್ದು - ಮಿಂದದ್ದು.. ಬರೀ ದೇಹವಲ್ಲ
ಮನಸೂ ಸಹ... !!
ಕಾರ್ಗತ್ತಲು ಅರಳುವ ಸಮಯ....
ಭೂ-ಬಾನು ಒಂದಾಗಿ ಮಾಡಲೆಂದೇ
ಬಂದನೇನೋ ಈ ಮಳೆರಾಯ...!
ನೆಂದು ಹೋದೆ
ಆ ಇಳೆಗಿಳಿದ ಮಳೆಗೆ
ಮಿಂದು ಹೋದೆ
ಅದು ತಂದ ಚಳಿಗೆ
ಅಂದವಿತ್ತು ಆ ಮಿಂಚು
ಮೋಡಗಳ ನಡುವೆ
ಮಿಂಚಿ ಮರೆಯಾಗುವ ಆ ಅಲ್ಪ ಕ್ಷಣ !
ಜೊತೆಗೆ...
ಎದೆಗೆ ಝಲ್ಲನೆ ಈಟಿ ಹೊಕ್ಕಂತೆ
ಸಿಡಿಲ ನರ್ತನ !
ಈ ನಡುವೆ ಕಾಣದ ಗೆಳತಿಯೋರ್ವಳ
ದೂರವಾಣಿ ಕರೆ!
ಅಸ್ಪಷ್ಟ ದನಿಯೊಂದಿಗೆ
ಉಭಯ ಕುಶಲೋಪರಿ!
ಈಗ ನೆಂದದ್ದು - ಮಿಂದದ್ದು.. ಬರೀ ದೇಹವಲ್ಲ
ಮನಸೂ ಸಹ... !!
Saturday, March 14, 2009
ನಿರ್ಗಮನ!
ನೀ ಕೊಟ್ಟ ಛಡಿ ಏಟಿನ ಗುರುತು
ಮನದಲ್ಲಿ ಮಾಸುವ ಮುನ್ನ
ನೀ ಇಟ್ಟ ಬರೆಗೆ ಹೃದಯ
ತಲ್ಲಣ!
ಹೆಪ್ಪುಗಟ್ಟಿದ ರಕ್ತವೂ
ಅಲ್ಲಿಂದ ಜಿನುಗಲು
ಅಶಕ್ತ !
ಒಡಲಿಗೆ ಇಟ್ಟ ಬೆಂಕಿ
ಆರಿಸಲಾಗದ
ಕಾಡ್ಗಿಚ್ಚು !
ಪಸರಿಸಿ ತನು ಮನದ ತುಂಬೆಲ್ಲಾ
ಉಳಿದದ್ದು ಬರೀ
ಬೂದಿ!
ನೆನಪಿನ ಗೊಂಚಲ
ನೀ ತಿವಿದು ಹೋದ ಸಂಜೆ
ಕಣ್ಣಂಚಿನ ಕಂಬನಿಯೂ ಆಗಿತ್ತು
ಬಿಸಿ!
ಕಲ್ಪನೆಗೂ ಮೀರಿದ್ದ
ಅಭಿಲಾಷೆಗಳ ಬಲೂನು
ಚುಚ್ಚು ಮಾತಿನ ಸೂಜಿಗೆ
ವಿಸ್ಫೋಟ!
ನಮ್ಮ ಕನಸುಗಳ ಮಾರಿಕೊಂಡ
ಆ ರಾತ್ರಿಯ ಕಹಿ ಸಮಯ
ಈಗಲೂ ಬೆಂಬಿಡದೆ ಕಾಡುವ
ದುಃಸ್ವಪ್ನ!
ತಣ್ಣಗೆ ಮಲಗಿದ್ದ ಪ್ರೀತಿಗೆ
ನೀ ಇಟ್ಟ ಕೊಳ್ಳಿ
ಆಗಿ ಹೋಯ್ತು
ಚಿತೆ!
ಅರ್ಧ ಸುಟ್ಟು ಉಳಿದ ಪಳಿಯುಳಿಕೆ
ಎಂದೆಂದೂ ಅಳಿಯದ
ಚಿಂತೆ!
ಮನದಲ್ಲಿ ಮಾಸುವ ಮುನ್ನ
ನೀ ಇಟ್ಟ ಬರೆಗೆ ಹೃದಯ
ತಲ್ಲಣ!
ಹೆಪ್ಪುಗಟ್ಟಿದ ರಕ್ತವೂ
ಅಲ್ಲಿಂದ ಜಿನುಗಲು
ಅಶಕ್ತ !
ಒಡಲಿಗೆ ಇಟ್ಟ ಬೆಂಕಿ
ಆರಿಸಲಾಗದ
ಕಾಡ್ಗಿಚ್ಚು !
ಪಸರಿಸಿ ತನು ಮನದ ತುಂಬೆಲ್ಲಾ
ಉಳಿದದ್ದು ಬರೀ
ಬೂದಿ!
ನೆನಪಿನ ಗೊಂಚಲ
ನೀ ತಿವಿದು ಹೋದ ಸಂಜೆ
ಕಣ್ಣಂಚಿನ ಕಂಬನಿಯೂ ಆಗಿತ್ತು
ಬಿಸಿ!
ಕಲ್ಪನೆಗೂ ಮೀರಿದ್ದ
ಅಭಿಲಾಷೆಗಳ ಬಲೂನು
ಚುಚ್ಚು ಮಾತಿನ ಸೂಜಿಗೆ
ವಿಸ್ಫೋಟ!
ನಮ್ಮ ಕನಸುಗಳ ಮಾರಿಕೊಂಡ
ಆ ರಾತ್ರಿಯ ಕಹಿ ಸಮಯ
ಈಗಲೂ ಬೆಂಬಿಡದೆ ಕಾಡುವ
ದುಃಸ್ವಪ್ನ!
ತಣ್ಣಗೆ ಮಲಗಿದ್ದ ಪ್ರೀತಿಗೆ
ನೀ ಇಟ್ಟ ಕೊಳ್ಳಿ
ಆಗಿ ಹೋಯ್ತು
ಚಿತೆ!
ಅರ್ಧ ಸುಟ್ಟು ಉಳಿದ ಪಳಿಯುಳಿಕೆ
ಎಂದೆಂದೂ ಅಳಿಯದ
ಚಿಂತೆ!
Monday, February 23, 2009
ಆಡೋಣ ಬಾ...
ಓಡೋಣ ಬಾ
ಹಿಮಗಿರಿಯ ತುತ್ತ ತುದಿಗೆ
ಅಲ್ಲಿ ಬೆಳೆಸೋಣ ಬಾ
ನಮ್ಮದೇ ಹೂದೋಟ
ಜಗದ ಹಂಗಿಲ್ಲದೆ
ಆಡೋಣ ಬಾ ಜೂಟಾಟ
ನಿನ್ನ ಕಣ್ಣು ನಾನಾಗೇ
ನನ್ನ ಕಣ್ಣು ನೀನಾಗು
ಹುಡುಕಾಟದಲ್ಲೇ
ಮೀರುವ ಜಗದ ಎಲ್ಲೆ
ಹುರುಪಿನಿಂದ ನಾವು
ಆಡೋಣ ಕಣ್ಣಾ ಮುಚ್ಚಾಲೆ
ಸೃಷ್ಟಿಸೋಣ
ಪ್ರೀತಿಯ ನದಿಯಲ್ಲಿ
ಅನುರಾಗದ ಅಲೆ
ಎಡವದಂತೆ ಆಡೋಣ
ಮನದ ಮೈದಾನದಲ್ಲೇ
ಅನವರತ ಕುಂಟು ಬಿಲ್ಲೆ
ನೆನಪಿರಲಿ...
ಸೋಲಿರಲಿ ಗೆಲುವಿರಲಿ
ಆಟದ ಸ್ಪೂರ್ತಿಯೇ
ಬೇಕು ಬದುಕಿಗೆಲ್ಲಾ
ಫಲಿತಾಂಶ ಯಾಕೆ ಬೇಕು
ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ !
ಹಿಮಗಿರಿಯ ತುತ್ತ ತುದಿಗೆ
ಅಲ್ಲಿ ಬೆಳೆಸೋಣ ಬಾ
ನಮ್ಮದೇ ಹೂದೋಟ
ಜಗದ ಹಂಗಿಲ್ಲದೆ
ಆಡೋಣ ಬಾ ಜೂಟಾಟ
ನಿನ್ನ ಕಣ್ಣು ನಾನಾಗೇ
ನನ್ನ ಕಣ್ಣು ನೀನಾಗು
ಹುಡುಕಾಟದಲ್ಲೇ
ಮೀರುವ ಜಗದ ಎಲ್ಲೆ
ಹುರುಪಿನಿಂದ ನಾವು
ಆಡೋಣ ಕಣ್ಣಾ ಮುಚ್ಚಾಲೆ
ಸೃಷ್ಟಿಸೋಣ
ಪ್ರೀತಿಯ ನದಿಯಲ್ಲಿ
ಅನುರಾಗದ ಅಲೆ
ಎಡವದಂತೆ ಆಡೋಣ
ಮನದ ಮೈದಾನದಲ್ಲೇ
ಅನವರತ ಕುಂಟು ಬಿಲ್ಲೆ
ನೆನಪಿರಲಿ...
ಸೋಲಿರಲಿ ಗೆಲುವಿರಲಿ
ಆಟದ ಸ್ಪೂರ್ತಿಯೇ
ಬೇಕು ಬದುಕಿಗೆಲ್ಲಾ
ಫಲಿತಾಂಶ ಯಾಕೆ ಬೇಕು
ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ !
Tuesday, December 16, 2008
ಸರಿತೆ
ಸೊಗಸಾದ ಕಲ್ಪನೆಯಾದೆ
ಮುತ್ತಂಥ ಅಕ್ಷರವಾದೆ
ಮುದ್ದಾದ ಪದವಾದೆ
ಸವಿಯಾದ ಸಾಲಾದೆ
ಎದೆಯ ಪುಟದಲಿ
ಒಲವಿನ ಕವನವಾದೆ
ರಾಗದಲ್ಲಿ ಬೆರೆತೆ
ಸರಾಗವಾಗಿ ಕುಳಿತೆ
ಸಂಗೀತದ ಆಲಾಪವಾಗಿ
ಬರೆದೆ ಹೊಸ ಚರಿತೆ
ನೆನಪ ಸ್ಮೃತಿಯಲಿ
ನೀನಾದೆ ಹರಿವ ಸರಿತೆ
ಮುತ್ತಂಥ ಅಕ್ಷರವಾದೆ
ಮುದ್ದಾದ ಪದವಾದೆ
ಸವಿಯಾದ ಸಾಲಾದೆ
ಎದೆಯ ಪುಟದಲಿ
ಒಲವಿನ ಕವನವಾದೆ
ರಾಗದಲ್ಲಿ ಬೆರೆತೆ
ಸರಾಗವಾಗಿ ಕುಳಿತೆ
ಸಂಗೀತದ ಆಲಾಪವಾಗಿ
ಬರೆದೆ ಹೊಸ ಚರಿತೆ
ನೆನಪ ಸ್ಮೃತಿಯಲಿ
ನೀನಾದೆ ಹರಿವ ಸರಿತೆ
Wednesday, October 01, 2008
ಕಾಗದದ ದೋಣಿ
ಕಾಗದದ ದೋಣಿ ಇದು ...
ನೆನೆಯಬಹುದು
ಮುಳುಗಲಾರದು
ಈಗಲೋ ಆಗಲೋ
ಹರಿಯಬಹುದು
ಕೊಂಚವಾದರೂ
ತೇಲದೆ ಇರದು
ಕಾಗದದ ದೋಣಿ ಇದು ...
ಬಹಳ ಚಿಕ್ಕದು
ಕಡಿಮೆ ಬೆಲೆಯದ್ದು
ಇದ ಮಾಡಿದ
ಮನದ ಮುಗ್ಧತೆಯದು
ಬೆಲೆ ಕಟ್ಟಲಾಗದ್ದು
ಕಾಗದದ ದೋಣಿ ಇದು ...
ಬಹು ದೂರ ಸಾಗದು
ನಾವಿಕನಿಲ್ಲ ಇಲ್ಲಿ
ಗುರಿ ತಲುಪಿಸಲು
ಒಬ್ಬಂಟಿ ಯಾನಿ ಇದು
ಗುರಿ ಮುಟ್ಟದೆ
ಅಳಿಯಲೂ ಬಹುದು
ಕಾಗದದ ದೋಣಿ ಇದು ...
ಸಾಟಿಯಲ್ಲ ಹಡಗಿಗೆ
ಇದು ಎಂದೆಂದೂ
ಮುಟ್ಟಲಿಲ್ಲ ಕಡಲಿಗೆ
ನಿಶ್ಚಲ ನೀರೆ ಪರಿಧಿ
ಅದರೊಳಗೇ ಇದು ಬಂಧಿ
ನೆನೆಯಬಹುದು
ಮುಳುಗಲಾರದು
ಈಗಲೋ ಆಗಲೋ
ಹರಿಯಬಹುದು
ಕೊಂಚವಾದರೂ
ತೇಲದೆ ಇರದು
ಕಾಗದದ ದೋಣಿ ಇದು ...
ಬಹಳ ಚಿಕ್ಕದು
ಕಡಿಮೆ ಬೆಲೆಯದ್ದು
ಇದ ಮಾಡಿದ
ಮನದ ಮುಗ್ಧತೆಯದು
ಬೆಲೆ ಕಟ್ಟಲಾಗದ್ದು
ಕಾಗದದ ದೋಣಿ ಇದು ...
ಬಹು ದೂರ ಸಾಗದು
ನಾವಿಕನಿಲ್ಲ ಇಲ್ಲಿ
ಗುರಿ ತಲುಪಿಸಲು
ಒಬ್ಬಂಟಿ ಯಾನಿ ಇದು
ಗುರಿ ಮುಟ್ಟದೆ
ಅಳಿಯಲೂ ಬಹುದು
ಕಾಗದದ ದೋಣಿ ಇದು ...
ಸಾಟಿಯಲ್ಲ ಹಡಗಿಗೆ
ಇದು ಎಂದೆಂದೂ
ಮುಟ್ಟಲಿಲ್ಲ ಕಡಲಿಗೆ
ನಿಶ್ಚಲ ನೀರೆ ಪರಿಧಿ
ಅದರೊಳಗೇ ಇದು ಬಂಧಿ
Monday, June 02, 2008
ನೀ ನನ್ನ ಪಾಲಿಗೆ
ಈ ಹೃದಯ ಪಿಸುಗುಟ್ಟಲು
ಮೌನ ಮಾತಾಯಿತು
ನಿನ್ನ ನೆನಪು ಮನ ಸೇರಲು
ದುಃಖ ಬರಿದಾಯಿತು
ನಿನ್ನ ಕಾಣುವ ಹಂಬಲಕೆ
ಹಗಲು ಹರಿಸಿತು ಸೆಳೆಮಿಂಚು
ನಿನ್ನ ಸೆಳೆವ ಉಪಾಯಕೆ
ಕತ್ತಲು ಕಟ್ಟಿತು ಒಳಸಂಚು
ಸುಳಿಯು ಸುಳಿದಾಡದು
ನೀ ನಿಂತ ಮನದ ಮಡುವಲ್ಲಿ
ಅಳಿವಿಲ್ಲ ನನಗೆ ಇದ್ದಷ್ಟು ದಿನ
ನಿನ್ನಾಸರೆಯ ಮಡಿಲಲ್ಲಿ
ನಲುಮೆಯ ಬದುಕಿದು ಒಗಟು
ಬಿಡಿಸು ಬಾ ಈ ಕಗ್ಗಂಟು
ಕಾರಿರುಳ ಕಾನನವು ಕತ್ತಲ ಕೂಪ
ಬೆಳಗಿಸೆ ಇರುಳ ಹೊತ್ತಿಸು ಒಲವಿನ ದೀಪ
ನಸುಗಂಪು ಹೂ ಸೂಸಿದೆ
ಈ ಕಲ್ಪನೆಯೇ ಹೊಸದಾಗಿದೆ
ಪ್ರತೀ ಕಲ್ಪನೆ ನಿನ್ನ ನೆನಪಂತಿದೆ
ಆ ನೆನಪೇ ಹಸಿರಾಗಿದೆ
ದಾಟಿ ಬಾ ಸಪ್ತ ಶರಧಿಗಳ
ಮೀಟಿ ಬಾ ಸುಪ್ತ ಭಾವಗಳ
ಕನಸು ನನಸಾಗುವ ಘಳಿಗೆಗೆ
ಸೇರಿ ಬಿಡು ನೀ ನನ್ನ ಪಾಲಿಗೆ
ಮೌನ ಮಾತಾಯಿತು
ನಿನ್ನ ನೆನಪು ಮನ ಸೇರಲು
ದುಃಖ ಬರಿದಾಯಿತು
ನಿನ್ನ ಕಾಣುವ ಹಂಬಲಕೆ
ಹಗಲು ಹರಿಸಿತು ಸೆಳೆಮಿಂಚು
ನಿನ್ನ ಸೆಳೆವ ಉಪಾಯಕೆ
ಕತ್ತಲು ಕಟ್ಟಿತು ಒಳಸಂಚು
ಸುಳಿಯು ಸುಳಿದಾಡದು
ನೀ ನಿಂತ ಮನದ ಮಡುವಲ್ಲಿ
ಅಳಿವಿಲ್ಲ ನನಗೆ ಇದ್ದಷ್ಟು ದಿನ
ನಿನ್ನಾಸರೆಯ ಮಡಿಲಲ್ಲಿ
ನಲುಮೆಯ ಬದುಕಿದು ಒಗಟು
ಬಿಡಿಸು ಬಾ ಈ ಕಗ್ಗಂಟು
ಕಾರಿರುಳ ಕಾನನವು ಕತ್ತಲ ಕೂಪ
ಬೆಳಗಿಸೆ ಇರುಳ ಹೊತ್ತಿಸು ಒಲವಿನ ದೀಪ
ನಸುಗಂಪು ಹೂ ಸೂಸಿದೆ
ಈ ಕಲ್ಪನೆಯೇ ಹೊಸದಾಗಿದೆ
ಪ್ರತೀ ಕಲ್ಪನೆ ನಿನ್ನ ನೆನಪಂತಿದೆ
ಆ ನೆನಪೇ ಹಸಿರಾಗಿದೆ
ದಾಟಿ ಬಾ ಸಪ್ತ ಶರಧಿಗಳ
ಮೀಟಿ ಬಾ ಸುಪ್ತ ಭಾವಗಳ
ಕನಸು ನನಸಾಗುವ ಘಳಿಗೆಗೆ
ಸೇರಿ ಬಿಡು ನೀ ನನ್ನ ಪಾಲಿಗೆ
Tuesday, April 22, 2008
ಹಕ್ಕಿಯ ಗೂಡು
ಹಕ್ಕಿಯ ಗೂಡು
ಹೇಗಿದೆ ನೋಡು
ಪುಟ್ಟ ಮರಿಗಳ
ತನ್ನೋಡಲಲ್ಲಿ
ಸಲಹುತ
ನಗುವುದು ನೋಡಲ್ಲಿ
ಹಾರದ ಮರಿಗಳ
ಬೀಳಿಸದೆ
ತಾಯಿಯ ನಂಬಿಕೆ
ಹುಸಿಮಾಡದೆ
ಕಾಲವ ಕಳೆವುದು
ಚಿಂತಿಸದೆ
ರೆಕ್ಕೆ ಬಲಿತ ಹಕ್ಕಿ
ಪುರ್ರನೆ ಹಾರಿ
ಗೂಡಿನ ಪ್ರೀತಿಯ
ಗಾಳಿಗೆ ತೂರಿ
ಮೇಲೆರುವುದು
ಗೂಡಿನ ಕೈ ಜಾರಿ
ನಗುತ ತೋರುತ ಸ್ವಾಗತ
ಹೊಸ ಮರಿಗಳಿಗೆ
ಆಶ್ರಯವಾಗಿ
ಅದುವೇ ಪ್ರೀತಿಯ ತೋರುತ
ಹಾಗೆ ಇರುವುದು
ಬೆಚ್ಚನೆ ಗೂಡಾಗಿ
ಹೇಗಿದೆ ನೋಡು
ಪುಟ್ಟ ಮರಿಗಳ
ತನ್ನೋಡಲಲ್ಲಿ
ಸಲಹುತ
ನಗುವುದು ನೋಡಲ್ಲಿ
ಹಾರದ ಮರಿಗಳ
ಬೀಳಿಸದೆ
ತಾಯಿಯ ನಂಬಿಕೆ
ಹುಸಿಮಾಡದೆ
ಕಾಲವ ಕಳೆವುದು
ಚಿಂತಿಸದೆ
ರೆಕ್ಕೆ ಬಲಿತ ಹಕ್ಕಿ
ಪುರ್ರನೆ ಹಾರಿ
ಗೂಡಿನ ಪ್ರೀತಿಯ
ಗಾಳಿಗೆ ತೂರಿ
ಮೇಲೆರುವುದು
ಗೂಡಿನ ಕೈ ಜಾರಿ
ನಗುತ ತೋರುತ ಸ್ವಾಗತ
ಹೊಸ ಮರಿಗಳಿಗೆ
ಆಶ್ರಯವಾಗಿ
ಅದುವೇ ಪ್ರೀತಿಯ ತೋರುತ
ಹಾಗೆ ಇರುವುದು
ಬೆಚ್ಚನೆ ಗೂಡಾಗಿ
Saturday, March 29, 2008
ನಗು
ಸಿಗಬಹುದು ಚಿಂತೆಯ
ಸಂತೆಯಲ್ಲೂ ನಗುವೆಂಬ
ಗುಳಿಗೆ
ದೂರವಿಲ್ಲ ಆ ನಗುವು
ನಮ್ಮದಾಗುವ
ಘಳಿಗೆ
ಹಣ್ಣೆಲೆ ಉದುರಿದ ಮೇಲೆ
ಚಿಗುರದೆ ಇರದು
ಚಿಗುರೆಲೆ
ದುಗುಡ ದೂರವಿಟ್ಟು
ಮತ್ತೆ ನಗುವ
ಈಗಲೇ
.
ಸಂತೆಯಲ್ಲೂ ನಗುವೆಂಬ
ಗುಳಿಗೆ
ದೂರವಿಲ್ಲ ಆ ನಗುವು
ನಮ್ಮದಾಗುವ
ಘಳಿಗೆ
ಹಣ್ಣೆಲೆ ಉದುರಿದ ಮೇಲೆ
ಚಿಗುರದೆ ಇರದು
ಚಿಗುರೆಲೆ
ದುಗುಡ ದೂರವಿಟ್ಟು
ಮತ್ತೆ ನಗುವ
ಈಗಲೇ
.
ನಕ್ಕು ನಗಿಸಿ
ನಗುವವರ ಮುಖದಲಿ
ನಗುವಾಗುವ
ಮರೆಯಿಸೆ ದುಃಖ
ಮನತಣಿಸುವ
ಹಾಡಾಗುವ
Sunday, March 23, 2008
ಹೀಗೊಂದು ನೋವು
ನಿನಗೆ ......
ಬರಿದಾಗದು
ಹೃದಯದ ಕೊಳ
ಮೊಗೆದಷ್ಟು ಪ್ರೀತಿ....
ಸಿಹಿ ನೀರ ಸವಿಯುವ
ಭಾಗ್ಯ ನಿರಂತರ...
ನನಗೆ......
ಕೈಗೆಟುಗದು
ಇಲ್ಲೇ ಇರುವ
ಪ್ರೀತಿ ಮರದ ಫಲ...
ಕಹಿ ನೆನಪಲ್ಲಿ ಮೀಯುವ
ಪಾಪ ನಿರಂತರ....
ನಿನಗಾಗಿ.....
ಮೀಸಲಿದೆ
ಹಸಿ ಪ್ರೀತಿ
ಬೆಚ್ಚನೆ ಆಸರೆ
ಕಣ್ ಗಾವಲಿನಲ್ಲಿ
ನೀ ನನ್ನ ಕೈ ಸೆರೆ...
ನನಗೇಕೆ.....
ಬೇಡದ
ಹುಸಿ ಪ್ರೀತಿ
ಅಣಕಿನ ಕೇಕೆ
ಒಲವಿನ ಬೇಲಿ ಇಲ್ಲದೆ
ಬಿರುಕು ನೆಲದಲ್ಲಿ ನಾ ಸೆರೆ...
ಹೀಗೇಕೆ ನೀನು .....
ಸುಮ್ಮನಾದೆ....
ಮಾತಿಗೆ ಸಿಗದೆ
ದೂರವಾದ ಬೆಳಕಂತೆ
ಬಾರದ ಮಳೆಯಂತೆ
ಮೌನದಿ ಕುಳಿತೆ...
ಆದರೂ ನಾನು...
ನಿರೀಕ್ಷಿಸುತ ನಿಂತೆ
ಸುಮ್ಮನಾಗದೆ
ಬೆಳಕಿಗಾಗಿ ಕೂತ ಕತ್ತಲಂತೆ
ಮಳೆಗಾಗಿ ಕಾದ ಧರೆಯಂತೆ
ಬರೆಯುತ ಕವಿತೆ.....
ಬರಿದಾಗದು
ಹೃದಯದ ಕೊಳ
ಮೊಗೆದಷ್ಟು ಪ್ರೀತಿ....
ಸಿಹಿ ನೀರ ಸವಿಯುವ
ಭಾಗ್ಯ ನಿರಂತರ...
ನನಗೆ......
ಕೈಗೆಟುಗದು
ಇಲ್ಲೇ ಇರುವ
ಪ್ರೀತಿ ಮರದ ಫಲ...
ಕಹಿ ನೆನಪಲ್ಲಿ ಮೀಯುವ
ಪಾಪ ನಿರಂತರ....
ನಿನಗಾಗಿ.....
ಮೀಸಲಿದೆ
ಹಸಿ ಪ್ರೀತಿ
ಬೆಚ್ಚನೆ ಆಸರೆ
ಕಣ್ ಗಾವಲಿನಲ್ಲಿ
ನೀ ನನ್ನ ಕೈ ಸೆರೆ...
ನನಗೇಕೆ.....
ಬೇಡದ
ಹುಸಿ ಪ್ರೀತಿ
ಅಣಕಿನ ಕೇಕೆ
ಒಲವಿನ ಬೇಲಿ ಇಲ್ಲದೆ
ಬಿರುಕು ನೆಲದಲ್ಲಿ ನಾ ಸೆರೆ...
ಹೀಗೇಕೆ ನೀನು .....
ಸುಮ್ಮನಾದೆ....
ಮಾತಿಗೆ ಸಿಗದೆ
ದೂರವಾದ ಬೆಳಕಂತೆ
ಬಾರದ ಮಳೆಯಂತೆ
ಮೌನದಿ ಕುಳಿತೆ...
ಆದರೂ ನಾನು...
ನಿರೀಕ್ಷಿಸುತ ನಿಂತೆ
ಸುಮ್ಮನಾಗದೆ
ಬೆಳಕಿಗಾಗಿ ಕೂತ ಕತ್ತಲಂತೆ
ಮಳೆಗಾಗಿ ಕಾದ ಧರೆಯಂತೆ
ಬರೆಯುತ ಕವಿತೆ.....
Saturday, March 01, 2008
ನಾನು-ನೀನು
ನೆನಪಿನ ಪುಟದ
ಬಿಳಿ ಹಾಳೆಯಲ್ಲಿ
ಹೊಸ ಚಿತ್ರ ನೀನು
ಹಳೆಯ ಬಣ್ಣ ನಾನು
ದೂರದಾಚೆಯ ಕಾನನದ
ಮಡಿಲಲ್ಲಿ
ನಿತ್ಯ ಹಸಿರು ನಿನ್ನದು
ಅಲ್ಲಿರುವ ಉಸಿರು ನನ್ನದು
.
ಸವಿ ಜೇನ ಕೊಳದ
ನಡುವಿನಲ್ಲಿ
ಅರಳಿದ ನೈದಿಲೆ ನಿನ್ನ ಕಂಗಳು
ನಾನು ಅರಳಿಸುವ ಬೆಳದಿಂಗಳು
.
ಕನಸಿನ ಲೋಕದ
ಹೂದೋಟದಲ್ಲಿ
ಕೆಂಪು ಗುಲಾಬಿಯು ನಿನ್ನಧರ
ನಾನದರ ಭ್ರಮರ
Wednesday, February 06, 2008
Unknown Feeling!
Saw it
Ignored it
Did not realize
What is it..!
No loss
No gain
Left over
Is just pain
Fractured mind
Is complete blind
Waiting for
A path of kind
Ignored it
Did not realize
What is it..!
No loss
No gain
Left over
Is just pain
Fractured mind
Is complete blind
Waiting for
A path of kind
Thursday, January 17, 2008
ಒಲವು
ಭಕ್ತಿಯ ಅಲೆ
ಮುಕ್ತಿಯ ತೀರಕೆ
ಪ್ರೀತಿಯ ಕಲೆ
ನಲ್ಮೆಯ ಜೀವಕೆ
ಜೇನ ನದಿಯಲ್ಲಿ
ಒಲುಮೆಯ ನೌಕೆ
ಮೀನ ಹೆಜ್ಜೆಯಲಿ
ಮನದಾಳದ ಬಯಕೆ
ಆಸೆಗಳೇ ಬಸಿರಾಗಿ
ಭಾವಗಳೇ ಉಸಿರಾಗಿ
ನೆನಪಾದವು ಹಸಿರು
ಒಲವು ಅದರ ಹೆಸರು
ಮುಕ್ತಿಯ ತೀರಕೆ
ಪ್ರೀತಿಯ ಕಲೆ
ನಲ್ಮೆಯ ಜೀವಕೆ
ಜೇನ ನದಿಯಲ್ಲಿ
ಒಲುಮೆಯ ನೌಕೆ
ಮೀನ ಹೆಜ್ಜೆಯಲಿ
ಮನದಾಳದ ಬಯಕೆ
ಆಸೆಗಳೇ ಬಸಿರಾಗಿ
ಭಾವಗಳೇ ಉಸಿರಾಗಿ
ನೆನಪಾದವು ಹಸಿರು
ಒಲವು ಅದರ ಹೆಸರು
Monday, December 24, 2007
ಮನಸಿನ್ನೂ ಹಸಿ ಗೋಡೆ....
ಅರ್ಥವಾಗದು ನನಗೆ
ಒಗಟಿನ ಮಾತು
ನಿಮ್ಮ ಪ್ರಬುದ್ಧ ನಡೆ-ನುಡಿ
ವ್ಯರ್ಥ ಜೀವಿ ನಾ
ಕಾರಣ......
ಮನಸಿದು ಹಸಿಗೋಡೆ...!
ಒಲಿಯದು ನನಗೆ
ಸಂಸ್ಕಾರ ಪಾಠ
ನಿಮ್ಮ ಜಗದ ನೀತಿ-ನಿಯಮ
ನನ್ನ ಪುಟ್ಟ ಜಗತ್ತೇ ಬೇರೆ
ಕಾರಣ.....
ಮನಸಿದು ಹಸಿಗೋಡೆ...!
ಶಕುತಿ ಇಲ್ಲ ನನಗೆ
ತಾಳಲು ಕಟು ಮಾತು
ನಿಮ್ಮ ಹಾಗಿನ ಧೈರ್ಯ
ಹಾಲಿನಂಥ ಮನಸು ಒಡೆದು ಹೋದೀತು
ಕಾರಣ.....
ಮನಸಿದು ಹಸಿಗೋಡೆ...!
ಮುಕುತಿ ಬೇಡ ನನಗೆ
ಸ್ವರ್ಗದ ಬಾಗಿಲಿಗೆ
ಅಲ್ಲ ನಾ ನಿಮ್ಮಂಥ ಆಸ್ತಿಕ
ಭಕುತಿಯೇ ಇಲ್ಲ ನನ್ನ ಪಾಲಿಗೆ
ಕಾರಣ....
ಮನಸಿದು ಹಸಿಗೋಡೆ...!
ನಿಮ್ಮಂತೆ ನಾನಲ್ಲ
ನನ್ನಂತೆ ನೀವಿಲ್ಲ
ಬದುಕಲಾರೆ ನಿಮ್ಮ ಹಾಗೆ ನಾ
ಕ್ರೂರ ಮನಗಳ ನಡುವೆ ಇರೆ ನಾ
ಕಾರಣ...
ಮನಸಿನ್ನೂ ಹಸಿಗೋಡೆ....!!
ಒಗಟಿನ ಮಾತು
ನಿಮ್ಮ ಪ್ರಬುದ್ಧ ನಡೆ-ನುಡಿ
ವ್ಯರ್ಥ ಜೀವಿ ನಾ
ಕಾರಣ......
ಮನಸಿದು ಹಸಿಗೋಡೆ...!
ಒಲಿಯದು ನನಗೆ
ಸಂಸ್ಕಾರ ಪಾಠ
ನಿಮ್ಮ ಜಗದ ನೀತಿ-ನಿಯಮ
ನನ್ನ ಪುಟ್ಟ ಜಗತ್ತೇ ಬೇರೆ
ಕಾರಣ.....
ಮನಸಿದು ಹಸಿಗೋಡೆ...!
ಶಕುತಿ ಇಲ್ಲ ನನಗೆ
ತಾಳಲು ಕಟು ಮಾತು
ನಿಮ್ಮ ಹಾಗಿನ ಧೈರ್ಯ
ಹಾಲಿನಂಥ ಮನಸು ಒಡೆದು ಹೋದೀತು
ಕಾರಣ.....
ಮನಸಿದು ಹಸಿಗೋಡೆ...!
ಮುಕುತಿ ಬೇಡ ನನಗೆ
ಸ್ವರ್ಗದ ಬಾಗಿಲಿಗೆ
ಅಲ್ಲ ನಾ ನಿಮ್ಮಂಥ ಆಸ್ತಿಕ
ಭಕುತಿಯೇ ಇಲ್ಲ ನನ್ನ ಪಾಲಿಗೆ
ಕಾರಣ....
ಮನಸಿದು ಹಸಿಗೋಡೆ...!
ನಿಮ್ಮಂತೆ ನಾನಲ್ಲ
ನನ್ನಂತೆ ನೀವಿಲ್ಲ
ಬದುಕಲಾರೆ ನಿಮ್ಮ ಹಾಗೆ ನಾ
ಕ್ರೂರ ಮನಗಳ ನಡುವೆ ಇರೆ ನಾ
ಕಾರಣ...
ಮನಸಿನ್ನೂ ಹಸಿಗೋಡೆ....!!
Subscribe to:
Posts (Atom)
