Sunday, September 30, 2012

ದೃಷ್ಟಿಕೋನ

ತಕರಾರಿರುವುದು ಪುಣ್ಯಕೋಟಿಯ


ಸತ್ಯ ಸಂಧತೆಯಲ್ಲ

ಪುಣ್ಯವಂತೆ ಆ ಆಕಳು....

ಮನಸನ್ನು ಘಾಸಿ ಗೊಳಿಸಿದ್ದು

ಹುಲಿರಾಯನ ದಾರುಣ ಸಾವು...

ಎಂಥ ಪಾಪದ ಹುಲಿಯು ಇದು

ಹುಲಿ ಹುಲ್ಲನ್ನು ಮೇದೀತೆ?

ಪುಣ್ಯಕೋಟಿಯ ಬೇಟೆಯಾಡಲು

ಹುಲಿಗೆ ಪ್ರಾಕೃತಿಕ ಹಕ್ಕಿತ್ತು...



ಪುಣ್ಯಕೋಟಿಯೇನೋ ತನ್ನ ಮಾತು ಉಳಿಸಿಕೊಂತು

ಹುಲಿ ಕರುಣೆಗೆ ಕಟ್ಟುಬಿದ್ದು ತನ್ನ ತಾನೇ ಕೊಂದುಕೊಂತು

ಸರಿ-ತಪ್ಪು ಯಾರದೂ ಅಲ್ಲ..

ಹಸುವಿಗೆ ಹುಲ್ಲು

ಹುಲಿಗೆ ಹಸುವು

ಎಲ್ಲವೂ ಹಸಿವೆಗೆ ....



ಕಥೆ ಕೇಳುವ ನಮಗೆ

ಆಕಳು ಮತ್ತು ಕರುವಿನ ಬಗ್ಗೆ ಅನುಕಂಪ...

ಹುಲಿಯ ವರ್ತನೆ ಭೀಬತ್ಸ!

ಕೊನೆಗೆ...

ಪುಣ್ಯಕೋಟಿಯ ಸತ್ಯಮೇವ ಜಯತೆ ಸಂದೇಶ...

ಕಣ್ಮರೆ ಯಾಗುವ ಹುಲಿಯ ತ್ಯಾಗ,

ಹಾಗು ಪುಣ್ಯಕೋಟಿ ಬಗ್ಗೆ

ನೆಮ್ಮದಿಯ ನಿಟ್ಟುಸಿರು...





"ಎನ್ನ ಒಡಹುಟ್ಟಕ್ಕ ನೀನು"

ಎಂದ ವ್ಯಾಘ್ರ ನ ಸಾವು ನ್ಯಾಯವೇ..?

ಆರು ನಮಗೆ ಹಿತವರು...?



ಜೀವ ಎಲ್ಲರಿಗೂ ಒಂದೇ....

No comments: