Monday, December 17, 2007

ಸತ್ಯ

ಮೌನ ರಾಗದಲ್ಲಿ
ನಿಶಬ್ದ ಗಾನ
ಇದ್ದರೂ ಕೇಳದು
ತೆರೆಯಬೇಕಿದೆ ಮನದ ಕಿವಿ
ಹಳೆಯ ಶಬ್ದಗಳಲ್ಲಿ
ಅದ್ಭುತ ಕವನ!
ಸಾಧ್ಯವಾಗದು ಯಾರಿಗೂ
ಜನ್ಮ ತಾಳಬೇಕಿದೆ ಶ್ರೇಷ್ಠ ಕವಿ!



ಹರಿದ ತಂತಿಯ ವೀಣೆಗೆ
ವೈಣಿಕನ ಹಂಗಿಲ್ಲ
ಸಿಗದು ನಾದ
ಚದುರಿಹೋದ ಅರ್ಥಗಳ ಕವನಕೆ
ಓದುಗನ ಹಂಗಿಲ್ಲ
ಅದು ಬರಿ ಮೊಂಡುವಾದ

1 comment: