ಮೌನ ರಾಗದಲ್ಲಿ
ನಿಶಬ್ದ ಗಾನ
ಇದ್ದರೂ ಕೇಳದು
ತೆರೆಯಬೇಕಿದೆ ಮನದ ಕಿವಿ
ಹಳೆಯ ಶಬ್ದಗಳಲ್ಲಿ
ಅದ್ಭುತ ಕವನ!
ಸಾಧ್ಯವಾಗದು ಯಾರಿಗೂ
ಜನ್ಮ ತಾಳಬೇಕಿದೆ ಶ್ರೇಷ್ಠ ಕವಿ!
ಹರಿದ ತಂತಿಯ ವೀಣೆಗೆ
ವೈಣಿಕನ ಹಂಗಿಲ್ಲ
ಸಿಗದು ನಾದ
ಚದುರಿಹೋದ ಅರ್ಥಗಳ ಕವನಕೆ
ಓದುಗನ ಹಂಗಿಲ್ಲ
ಅದು ಬರಿ ಮೊಂಡುವಾದ
Subscribe to:
Post Comments (Atom)
1 comment:
madhu,
satyavaada saalugaLu...
Post a Comment