Friday, June 19, 2009

ಮಳೆಯಲ್ಲಿ ನೆಂದು....

ಗೋಧೂಳಿ ಸಮಯ ತುಸು ಜಾರಿ
ಕಾರ್ಗತ್ತಲು ಅರಳುವ ಸಮಯ....
ಭೂ-ಬಾನು ಒಂದಾಗಿ ಮಾಡಲೆಂದೇ
ಬಂದನೇನೋ ಈ ಮಳೆರಾಯ...!
ನೆಂದು ಹೋದೆ
ಆ ಇಳೆಗಿಳಿದ ಮಳೆಗೆ

ಮಿಂದು ಹೋದೆ
ಅದು
ತಂದ ಚಳಿಗೆ
ಅಂದವಿತ್ತು
ಆ ಮಿಂಚು
ಮೋಡಗಳ ನಡುವೆ

ಮಿಂಚಿ ಮರೆಯಾಗುವ ಆ ಅಲ್ಪ ಕ್ಷಣ !
ಜೊತೆಗೆ...
ಎದೆಗೆ ಝಲ್ಲನೆ ಈಟಿ ಹೊಕ್ಕಂತೆ

ಸಿಡಿಲ ನರ್ತನ !
ಈ ನಡುವೆ ಕಾಣದ ಗೆಳತಿಯೋರ್ವಳ
ದೂರವಾಣಿ ಕರೆ!
ಅಸ್ಪಷ್ಟ ದನಿಯೊಂದಿಗೆ
ಉಭಯ ಕುಶಲೋಪರಿ!
ಈಗ ನೆಂದದ್ದು - ಮಿಂದದ್ದು.. ಬರೀ ದೇಹವಲ್ಲ
ಮನಸೂ ಸಹ... !!

No comments: