ಸಿಗಬೇಕಿದೆ ಭಾವ ತಂತು
ಮಿಡಿಯಲು ಶ್ರಾವ್ಯ ನಾದ
ಕಾಯುತಿದೆ ನಿನಗಾಗಿ ಕಾದ
ಜೀವವಿದು ಇಲ್ಲೇ ನಿಂತು
ನಿನ್ನ ನಗು ಮೊಗ ನೋಡಿ
ನಾ ಅಂದು ಕಲಿತ ಹೊಸ ರಾಗ
ನಿನ್ನ ನುಡಿಯೆಂಬ ಶ್ರುತಿಯ
ಹುಡುಕಿ ಹೊರಟಿದೆ
ನನ್ನೆದೆಯ ಗೂಡಿಗೆ
ಸೋಕಿ ಹೋದ ಆ ಕ್ಷಣವು
ಇತಿಹಾಸದ ಪುಟದಲ್ಲಿ ಅಮರವಾಗಿದೆ
ನನ್ನ ಗಲ್ಲ ಸವರಿ ಹೋದ
ನಿನ್ನ ತುರುಬಿನ ಮಲ್ಲಿಗೆ
ನಾಚಿ ಕೆಂಪಾದಾಗಲೇ
ಅದರ ಪರಿಮಳ ದುಪ್ಪಟ್ಟಾಯಿತು
ನಿನ್ನ ಸೆರಗಲ್ಲಿ ಗಂಟು ಕಟ್ಟಿದ
ನನ್ನ ಪ್ರೀತಿಯ ಒಗಟನ್ನು
ನೀನು ಬಿಚ್ಚಿ ಬಿಡಿಸಿದ ಕಲೆಯೇ
ನನಗಾದ ಜ್ಞಾನೋದಯ
ಉಸಿರುಸಿರು ಒಂದಾದಾಗಲೇ
ಅರಿತುಕೊಂಡೆ ನೀನನ್ನ ದೇವತೆ
ನೀ ಹಡೆದ ಹೊಸ ಜೀವ
ನಮ್ಮ ಬದುಕಿನ ಕಲರವ
2 comments:
ತು೦ಬಾ ದಿನಗಳ ನ೦ತರ ಬ೦ದ ನಿಮ್ಮ ಈ ಕವನ ತು೦ಬಾ ಸು೦ದರವಾಗಿದೆ... ಅನುರಾಗ ತು೦ಬಿದೆ ಈ ಕವನದ ಪ್ರತಿಯೊ೦ದು ಸಾಲುಗಳಲ್ಲೂ....
dhanyavaadagalu Sudhesh..
eko samaya kaijaruthide... bahala dinagaladavu kavana baredu...
ee kade bandidakke tubma thanks :)
Post a Comment