ಮನದಲ್ಲಿ ಚಿಗುರೊಡೆದಿದ್ದ
ಕನಸು ಚಿವುಟಿಹೋಗಿದೆ
ಮತ್ತೆ ಎಂದಿಗೂ ಅರಳದ
ಬಾಡಿಹೋದ ಬಳ್ಳಿಯ ಹಾಗೆ
ಬಾಳ ಹಲವು ಕವಲು ದಾರಿಗಳಲ್ಲಿ ಸಾಗಿದೆ ಓಟ
ಕಮರಿಹೋದ ಕನಸುಗಳ ಹುಡುಕಾಟ
ಅವುಗಳನರಸಿ ಮತ್ತೆ ನನಸಾಗಿಸಿಕೊಳ್ಳುವ ಹಠ
ಬೇಕಿದೆ ಒಂದು ಮಿಡಿಯುವ ಜೀವ
ನಮ್ಮ ಕಷ್ಟಗಳಿಗೆ ನೆರವಾಗುವಂತ ಭಾವ
ತುಂಬಲು ಸತ್ತು ಹೋದ ಬಯಕೆಗಳಿಗೆ ಹೊಸ ಪ್ರಭಾವ
ಹೊರಹಾಕಲು ಈ ಚಿಂತೆಗಳ ರಾಶಿಯನ್ನ
ಬರೆದುಬಿಡೋಣ ರಾಶಿ ರಾಶಿ ಕವನಗಳನ್ನ
ಶಾರದೆ ಒಲಿಯುವವರೆಗೂ ತೋಚಿದ್ದು ಗೀಚೋಣ!
Subscribe to:
Post Comments (Atom)
1 comment:
thOchiddu geechuththaa iri.. devara krupe nim mEle sada irali
Post a Comment