Tuesday, May 15, 2007

ಅಸ್ಪಷ್ಟತೆ..

ಓಡಲ ದನಿ ಕೇಳುವುದೇ ಹೊರಗಿನವರಿಗೆ?
ಹೊರಬಂದ ಮಾತದು ನಾಟುವುದೇ ಒಳಗವರಿಗೆ?
ಬೇಕೇ ಬೇಕು ಒಳ ಮನಸು ಅರ್ಥೈಸಲು
ಕೆಲವು ಮಾರ್ಮಿಕ ನುಡಿಗಳ ಸಾಲು


ಅಸ್ಪಷ್ಟ ರೇಖೆಗಳ ನಡುವೆ ಊಹಿಸುವ
ಸಮನಾಂತರ ಬದುಕೆಂಬುದೇ ಒಂದು ಅಸಾಧ್ಯ ಕಲ್ಪನೆಯಲ್ಲವೇ?
ಸಮರಸದಿಂದಿರಲು ಬೇಕೇ ಬೇಕು
ಪರಸ್ಪರ ನಂಬಿಕೆಗಳ ಸರಕು


ಇನ್ನೆಷ್ಟು ದಿನ ವಿರಬಹುದು ನಾವು ಈ ಜಗದಲಿ?
ಸೂರ್ಯ ಶಾಶ್ವತವಾಗಿ ಮರೆಯಾಗುವವರೆಗೂ..?
ಚಂದ್ರ ಪೂರ್ಣವಾಗಿ ಕರಗುವವರೆಗೂ...?
ಮರೆಮಾಚದೆ ಒಪ್ಪೋಣ ನಮ್ಮೆಲ್ಲರ ಆಟ
ಯಕಶ್ಚಿತ್ ನಾಲ್ಕು ದಿನಗಳ ಜೂಜಾಟ

ವಿಚಿತ್ರ ಸೋಗಿನಲ್ಲಿ ಬಾಳುವುದು ಅಪಕ್ವತೆಯ ಲಕ್ಷಣ
ಖಚಿತವಾಗಿ ಹೇಳಲಾಗದು ಅದೆಷ್ಟು ದಿನ ಸಾಗೀತು ಸುಳ್ಳುಗಳ ನಿರಾತಂಕ ಪಯಣ
ಕೊನಯುಂಟು ಪ್ರತಿದಿನದ ಮಿಥ್ಯ ನಿರೀಕ್ಷೆಗಳಿಗೆ
ಮೀಸಲಿರಲಿ ಕೆಲವು ಘಂಟೆಗಳು ಸತ್ಯವಾದ ಸಮೀಕ್ಷೆ ಗಳಿಗೆ

ಇರುವಷ್ಟು ದಿನದಲಿ ನೆಡಬಾರದೇಕೆ
ಪ್ರೀತಿ ವಿಶ್ವಾಸಗಳ ಪುಟ್ಟ ಪುಟ್ಟ ಗಿಡಗಳ
ಅದೇ ಗಿಡಗಳು ನಾಳೆ ಕಾಣಲಾರವೇ ನಂಬಿಕೆಯ ಮೊಳಕೆ
ಎಲೆಗಳ ಮಧ್ಯೆ ಟಿಸಿ ಲೊಡೆಯುವ ಆಶಾವಾದದ ಕುಡಿ
ಆಗಲಿದೆ ಬದುಕ ಹಸನುಗೊಳಿಸುವ ನಿರ್ಮಲ ಗುಡಿ

1 comment:

ಅಂತರ್ವಾಣಿ said...

waw! soorya , chandrara hOlisi bareda saalu super..:)